Saturday, May 4, 2024
spot_imgspot_img
spot_imgspot_img

ಇಂತಹ ಕಾಯಿಲೆ ಇರುವವರು, ಆಗಾಗ ಹೀರೆಕಾಯಿ ಸೇವನೆ ಮಾಡುತ್ತಲೇ ಇರಬೇಕು!

- Advertisement -G L Acharya panikkar
- Advertisement -

ಈ ತರಕಾರಿಯಲ್ಲಿ ನೋಡಲು ಸ್ವಲ್ಪ ಒರಟಾಗಿ ಹಾಗೂ ಮೇಲ್ಭಾಗದ ಸಿಪ್ಪೆ ದಪ್ಪಗೆ ಹಾಗೂ ಮುಳ್ಳಿನ ರೀತಿ ಉದ್ದನೆಯ ಬಾಲದ ರೀತಿ ಕಂಡು ಬಂದರೂ ಕೂಡ, ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ.
ಪ್ರಮುಖವಾಗಿ ಇದರಲ್ಲಿ ನಾರಿನಾಂಶ, ಅಗಾಧ ಪ್ರಮಾಣದಲ್ಲಿ ನೀರಿನಾಂಶ, ವಿಟಮಿನ್ ಬಿ6, ವಿಟಮಿನ್ ಸಿ ಹಾಗೂ ಕಣ್ಣಿನ ಆರೋಗ್ಯಕ್ಕೆ ಪ್ರಮುಖವಾಗಿ ಬೇಕಾಗುವ ವಿಟಮಿನ್ ಎ, ಮೆಗ್ನೀಸಿಯಮ್, ಕಬ್ಬಿಣಾಂಶ ಹೀಗೆ ಇತ್ಯಾದಿ ಖನಿಜಾಂಶ ಗಳು ಈ ತರಕಾರಿಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಹೀಗಾಗಿ ಈ ತರಕಾರಿಯ ಮೇಲ್ಭಾಗದ ಸಿಪ್ಪೆಯನ್ನು ನಿಧಾನಕ್ಕೆ ನಿವಾರಿಸಿ, ಒಳಭಾಗದಲ್ಲಿ ಕಂಡುಬರುವ ಮೆತ್ತನೆಯ ತಿರು ಳನ್ನು, ಪಲ್ಯ, ಚಟ್ನಿ ಅಥವಾ ಸಾಂಬರ್ ಮಾಡಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಗ ಳನ್ನು ಪಡೆದುಕೊಳ್ಳಬಹುದು.

ಇಂದಿನ ದಿನಗಳಲ್ಲಿ ದೃಷ್ಟಿ ದೋಷದ ಸಮಸ್ಯೆ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯಾಗಿವೆ. ಇದಕ್ಕೆ ಪ್ರಮುಖ ಕಾರಣ, ಆಹಾರ ಪದ್ಧತಿಯಲ್ಲಿ ಕಣ್ಣಿನ ಆರೋಗ್ಯಕ್ಕೆ ಬೇಕಾಗುವ ಪೋಷಕಾಂಶ ಗಳನ್ನು ಸೇವನೆ ಮಾಡದೇ ಇರುವುದು, ಹೆಚ್ಚು ಟಿವಿ, ಮೊಬೈಲ್ ನೋಡುವುದು, ರಾತ್ರಿ ತುಂಬಾ ಹೊತ್ತಿನವರೆಗೆ ಮೊಬೈಲ್ ನೋಡುವುದು ಇವೆಲ್ಲಾ ಸಮಸ್ಯೆಗಳಿಂದಾಗಿ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು, ಹೆಚ್ಚಿನವರಿಗೆ ಸಣ್ಣವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದೆ.
ಹೀಗಾಗಿ ಕಣ್ಣಿನ ಆರೋಗ್ಯ ವನ್ನು ಕಾಪಾಡಲು, ಆರೋಗ್ಯ ಕಾರಿ ಜೀವನಶೈಲಿಯ ಜೊತೆಗೆ, ವಿಟಮಿನ್ ಎ ಅಂಶ ಹೆಚ್ಚಾಗಿರುವ ತರಕಾರಿಗಳನ್ನು ಸೇವನೆ ಮಾಡಬೇಕು.
ವಿಶೇಷವಾಗಿ ಹೀರೆಕಾಯಿಯಲ್ಲಿ ಇರುವಂತಹ ವಿಟಮಿನ್ ಎ ಅಂಶವು ಬೆಟಾ ಕ್ಯಾರೋಟಿನ್ ರೂಪದಲ್ಲಿದ್ದು, ಕಣ್ಣಿನ ದೃಷ್ಟಿ ಸಂಬಂಧಪಟ್ಟ ಸಮಸ್ಯೆಗಳನ್ನು ಬಹಳ ಬೇಗನೇ ಕಡಿಮೆ ಮಾಡುವುದು.

ರಕ್ತಹೀನತೆ ಅಥವಾ ಅನಿಮಿಯಾ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿಗಳು, ಮಾತ್ರೆಗಳು ಲಭ್ಯವಿದ್ದರೂ, ಕೂಡ ಕೆಲವೊಂದು ತರಕಾರಿಗಳು ಈ ಕಾಯಿಲೆಯನ್ನು ನಿವಾರಣೆ ಮಾಡುವುದು.
ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಹೀರೆಕಾಯಿ. ಇದಕ್ಕೆ ಪ್ರಮುಖವಾಗಿ ಈ ತರಕಾರಿಯಲ್ಲಿ ಕಬ್ಬಿಣಾಂಶ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದರಿಂದ, ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ, ರಕ್ತಹೀನತೆ ಸಮಸ್ಯೆ ಯನ್ನು ನಿವಾರಿಸಲು ನೆರವಾಗುತ್ತದೆ.​

ಮೊದಲೇ ಹೇಳಿದ ಹಾಗೆ, ಹೀರೆಕಾಯಿಯಲ್ಲಿ ಅಧಿಕ ಪ್ರಮಾ ಣದಲ್ಲಿ ನೀರಿನಾಂಶದ ಜೊತೆಗೆ, ನಾರಿನಾಂಶದ ಪ್ರಮಾಣವು ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ, ದೇಹದ ನಿರ್ಜಲೀಕರಣದ ಸಮಸ್ಯೆಯನ್ನು ದೂರಮಾಡಿ, ನಾವು ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಜೀರ್ವಾಗುವಂತೆ ನೋಡಿಕೊಳ್ಳುತ್ತದೆ.
ಅದರಲ್ಲೂ ಪ್ರಮುಖವಾಗಿ ಈ ತರಕಾರಿಯಲ್ಲಿ ಸೆಲ್ಯುಲೋಸ್ ಎಂಬ ನೈಸರ್ಗಿಕ ನಾರಿನಾಂಶ, ನಾವು ಸೇವನೆ ಮಾಡಿದ ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಸರಿಯಾಗಿ ಜೀರ್ಣ ವಾಗುವ ಹಾಗೆ ನೋಡಿಕೊಳ್ಳುತ್ತದೆ.
ಹೀಗಾಗಿ ಈಗಾಗಲೇ, ಮಲಬದ್ಧತೆಯ ಸಮಸ್ಯೆ ಇರುವವರು, ತಮ್ಮ ಆಹಾರ ಪದ್ಧತಿಯಲ್ಲಿ ಈ ತರಕಾರಿಯನ್ನು ಸೇರಿಸಿ ಕೊಳ್ಳುವುದು ಒಳ್ಳೆಯದು.
ಇಲ್ಲಾಂದ್ರೆ ಒಂದು ಲೋಟ ಹೀರೆಕಾಯಿ ಜ್ಯೂಸ್ ಗೆ ಲ್ಪ ಜೇನು ತುಪ್ಪ ಮಿಶ್ರಣ ಮಾಡಿ ಕುಡಿಯುವುದರಿಂದ, ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಮಧುಮೇಹ ರೋಗಿಗಳಿಗೆ ಈ ತರಕಾರಿ ಬಹಳ ಒಳ್ಳೆಯದು.
ಅಧಿಕ ಪ್ರಮಾಣದಲ್ಲಿ ನಾರಿನಾಂಶ, ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳ ಜೊತೆಗೆ ಹಲವಾರ ಬಗೆಯ ಪೌಷ್ಟಿಕಾಂಶಗಳು, ಈ ತರಕಾರಿಯಲ್ಲಿ ಸಮೃದ್ಧವಾಗಿ ಸಿಗುವುದರಿಂದ, ದೇಹದಲ್ಲಿ ಇನ್ಸುಲಿನ್ ಪ್ರಮಾಣದ ಉತ್ಪತ್ತಿಯನ್ನು ಹೆಚ್ಚು ಮಾಡಿ, ದೇಹದ ರಕ್ತದ ಸಕ್ಕರೆ ಮಟ್ಟವನ್ನು ತಗ್ಗಿಸಿ, ತನ್ಮೂಲಕ ಮಧುಮೇಹ ಕಾಯಿಲೆ ನಿಯಂತ್ರಣ ಮೀರಿ ಹೋಗದಂತೆ ತಡೆಯುತ್ತದೆ. ಅಷ್ಟೇ ಅಲ್ಲದೆ, ದೇಹದ ತೂಕವನ್ನು ನಿಯಂತ್ರಣ ಮಾಡಿ ಮೆಟಬಾಲಿಸಂ ಪ್ರಕ್ರಿಯೆ ಯನ್ನು ಹೆಚ್ಚು ಮಾಡುತ್ತದೆ.

- Advertisement -

Related news

error: Content is protected !!