ಕಬ್ಬಿಣದ ಕೊರತೆ ಅಥವಾ ರಕ್ತಹೀನತೆ ಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ನೀವು ಈ ನೈಸರ್ಗಿಕ ಪಾನೀಯಗಳ ಮೊರೆ ಹೋಗಬಹುದು. ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ಸರಿದೂಗಿಸಲು ಅಗತ್ಯ ಪೂರಕಗಳನ್ನು ಅವಲಂಬಿಸುವುದರ ಹೊರತಾಗಿ, ನೀವು ಋತುಮಾನದ ಹಣ್ಣು ಮತ್ತು ತರಕಾರಿಗಳ ರಸಗಳನ್ನು ಬಳಸಬಹುದು.
ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಆಗಿದೆ ಎಂದು ವೈದ್ಯರು ಹೇಳುವುದನ್ನು ಕೇಳಿದ್ದೀರಾ? ನಿಮಗೂ ಆ ಸಮಸ್ಯೆ ಕಾಡುತ್ತಿದೆಯಾ? ನಿಮಗೆ ತಿಳಿದಿರಬಹುದು ಕಬ್ಬಿಣ ಅಂಶದ ಕೊರತೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಕಬ್ಬಿಣ ಅಂಶದ ಕೊರತೆಯ ಕೆಲವು ಸಾಮಾನ್ಯ ಲಕ್ಷಣಗಳಿಗೆ ಕಾರಣವಾಗುತ್ತದೆ ಅದೇನೆಂದರೆ ನಿರಂತರ ಆಯಾಸ, ಉಸಿರಾಟದ ತೊಂದರೆ, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು ಮತ್ತು ಮಸುಕಾದ ಚರ್ಮ ಕ್ಕೆ ಕಾರಣವಾಗುತ್ತದೆ. ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ಸರಿದೂಗಿಸಲು ಅಗತ್ಯ ಪೂರಕಗಳನ್ನು ಅವಲಂಬಿಸುವುದರ ಹೊರತಾಗಿ, ನೀವು ಋತುಮಾನದ ಹಣ್ಣು ಮತ್ತು ತರಕಾರಿಗಳ ರಸಗಳನ್ನು ಬಳಸಬಹುದು.
ನೆಲ್ಲಿಕಾಯಿ ವಿಟಮಿನ್ ಸಿ ಯ ಶಕ್ತಿ ಕೇಂದ್ರವಾಗಿದೆ. ಆಮ್ಲಾ ರಸದ ದೈನಂದಿನ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕಬ್ಬಿಣ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಆ ಮೂಲಕ ಹಿಮೋಗ್ಲೋಬಿನ್ ರಚನೆಗೆ ಸಹಾಯ ಮಾಡುತ್ತದೆ. ಇದರ ಮೃದುವಾದ ಪರಿಮಳದ ಜೊತೆಗೆ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ಬೀಟ್ರೂಟ್ ಜ್ಯೂಸ್ ನಲ್ಲಿ ಕಬ್ಬಿಣ ಅಂಶ ಹೇರಳವಾಗಿರುತ್ತದೆ.ಈ ಸಾಂಪ್ರದಾಯಿಕ ಪಾನೀಯವು ವಿಶಿಷ್ಟ ಪರಿಮಳ ಮತ್ತು ದೇಹಕ್ಕೆ ಪೌಷ್ಠಿಕಾಂಶವನ್ನು ಸರಿಯಾಗಿ ಒದಗಿಸುವಲ್ಲಿ ನೆರವಾಗುತ್ತದೆ.
ಭಾರತದ ಜನಪ್ರಿಯ ಪಾನೀಯಗಳಲ್ಲಿ ಕಬ್ಬಿನ ರಸವು ಒಂದು. ಸಿಹಿ ರುಚಿ ಮಾತ್ರವಲ್ಲದೆ ಕಬ್ಬಿಣ ಮತ್ತು ಇತರ ಅಗತ್ಯ ಖನಿಜಗಳ ಉತ್ತಮ ಮೂಲವಾಗಿದೆ. ಇದರ ನೈಸರ್ಗಿಕ ಸಿಹಿಯು ಕಬ್ಬಿಣ ಅಂಶದ ಸೇವನೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ, ಜೊತೆಗೆ ಇದರಲ್ಲಿ ಪೌಷ್ಟಿಕಾಂಶ ಹೇರಳವಾಗಿರುವುದರಿಂದ ಆರೋಗ್ಯದ ಉತ್ತೇಜನಕ್ಕೆ ಉತ್ತಮ ಆಯ್ಕೆಯಾಗಿದೆ.