ನದಿಗೆ ಸ್ನಾನ ಮಾಡಲು ಹೋಗಿದ್ದ ಇಬ್ಬರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕೇರಳದ ಕರಿಂಪುಳದ ಚೆರುಪುಳದಲ್ಲಿ ನಡೆದಿದೆ.
ಮೃತಪಟ್ಟ ಯುವತಿಯರನ್ನು ಚೆರ್ಪುಲಸ್ಸೆರಿ ಕುಟ್ಟಿಕೋಡ್ ಪರಕ್ಕಲ್ ಹೌಸ್ ನಿವಾಸಿ ಮುಸ್ತಫಾ ಅವರ ಪುತ್ರಿ ರಿಜ್ವಾನಾ (19) ಮತ್ತು ಮನ್ನಾರ್ಕಾಡ್ ನಿವಾಸಿ ಕರುವರಕುಂಡು ಚೆರುಮಾಲಾ ಹೌಸ್ ನಿವಾಸಿ ಅಬೂಬಕ್ಕರ್ ಅವರ ಪುತ್ರಿ ದೀಮಾ ಮೆಹಬಾ (20) ಎಂದು ಗುರರುತಿಸಲಾಗಿದೆ.
ರಿಜ್ವಾನಾ ಸ್ಥಳದಲ್ಲೇ ಮೃತಪಟ್ಟರೆ, ದೀಮಾ ಮೆಹಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರೊಂದಿಗೆ ಇದ್ದ ಕೊಟ್ಟೋಪದಂನ ಪುತನಿಕ್ಕಾಡ್ ಪುಥೆನ್ವೀಟಿಲ್ ನಿವಾಸಿ ಶಂಸುದ್ದೀನ್ ಅವರ ಪುತ್ರ ಬಾದುಷಾ (20) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈದ್ ಉಲ್ ಫಿತರ್ ಸಂದರ್ಭದಲ್ಲಿ ಅರಪ್ಪಾರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅವರು ತಮ್ಮ ಸಂಬಂಧಿಕರೊಂದಿಗೆ ನದಿಯನ್ನು ನೋಡಲು ಹೋದಾಗ ಪೊಂಬ್ರಾದ ಕೂಟಿಲಕಡವು ಎಂಬಲ್ಲಿ ನದಿಗೆ ಅಡ್ಡಲಾಗಿ ಇರುವ ತೋಟವನ್ನು ನೋಡಲು ಹೋಗಿದ್ದರು. ಅವರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನದಿಯಲ್ಲಿದ್ದ ಆಳವಾದ ಗುಂಡಿಯಲ್ಲಿ ಸಿಕ್ಕಿಬಿದ್ದಿದ್ದರು. ಒಟ್ಟಿಗಿದ್ದರವರು ರಕ್ಷಣೆಗಾಗಿ ಕೂಗಿದಾಗ ಧಾವಿಸಿ ಬಂದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರೂ ಒಬ್ಬರನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಯಿತು ಗುರುವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ.