- Advertisement -
- Advertisement -
ಕೆಲಸಕ್ಕೆ ಅರಸಿಕೊಂಡು ಬಂದಿದ್ದ ಯುವಕರಿಬ್ಬರು ಮಲಗಿದಲ್ಲಿಯೇ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಹಾಸನ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ.
ಉತ್ತರಪ್ರದೇಶದ ನಯನ್ಪುರ ಗ್ರಾಮದ ರಾಮ್ ಸಂಜೀವನ್ (30) ಹಾಗೂ ನವಾಬ್ (24) ಮೃತ ದುರ್ದೈವಿಗಳು.
ಕಳೆದ ಹದಿನೈದು ದಿನಗಳ ಹಿಂದೆ ಯುವಕರು ಕೆಲಸವನ್ನು ಅರಸಿ ಉತ್ತರ ಪ್ರದೇಶದಿಂದ ಹಾಸನಕ್ಕೆ ಬಂದಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದ ಯುವಕರು ರಾತ್ರಿ ಔಷಧಿ ಸೇವಿಸಿ ಮಲಗಿದ್ದರು.
ಇಡೀ ದಿನ ಯುವಕರು ಬಾಗಿಲು ತೆರೆಯದಿದ್ದಾಗ ಮನೆ ಮಾಲೀಕರು ಬಾಗಿಲನನ್ನು ಒಡೆದು ನೋಡಿದಾಗ ಯುವಕರಿಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮಾಲೀಕರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳು ಹಾಸನದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆಯಾಗಿವೆ.
- Advertisement -