ಉಡುಪಿ(ಅ.25): ಗಾಂಧಿ ಆಸ್ಪತ್ರೆಗೆ ಯುವತಿಯೊಬ್ಬಳನ್ನು ದಾಖಲಿಸಿ ಯುವಕನೊಬ್ಬ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ಇದೀಗ ಯುವತಿ ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಯುವತಿ ಮತ್ತು ಆಕೆಯ ಪ್ರಿಯಕರ ಅಂಬಾಗಿಲು ಸಮೀಪದವರು ಎನ್ನಲಾಗಿದೆ. ಇದೀಗ ಯುವಕನಿಗಾಗಿ ಪೊಲೀಸರು ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.ನಿನ್ನೆ ತಡರಾತ್ರಿ ಪ್ರಶಾಂತ್ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಕ್ಷಿತಾಳನ್ನ ಗಾಂಧಿ ಅಸ್ಪತ್ರೆಗೆ ಸೇರಿಸಿದ್ದ ಯುವಕ ಪ್ರಶಾಂತ್ ಆ ಬಳಿಕ ಅತನ ಮೊಬೈಲಿನಿಂದ ರಕ್ಷಿತಾ ಮನೆಯವರಿಗೆ ಕರೆ ಮಾಡಿ ರಕ್ಷಿತಾಳಿಗೆ ಅರೋಗ್ಯ ಸಮಸ್ಯೆಯಾಗಿದೆ ಅಸ್ಪತ್ರೆ ಸೇರಿಸಿದ್ದೇನೆ ಎಂದು ಮಾಹಿತಿ ನೀಡಿದ್ದ.ಆದರೆ ರಕ್ಷಿತಾ ಅಷ್ಟರಲ್ಲೇ ಕೊನೆಯುಸಿರು ಎಳೆದಿದ್ದಳು.ಈ ಮಧ್ಯೆ ಪ್ರಿಯಕರ ಪ್ರಶಾಂತ್ ಮೊಬೈಲ್ ಸ್ವಿಚ್ಡ್ ಅಫ್ ಮಾಡಿ ನಾಪತ್ತೆಯಾಗಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಉಡುಪಿ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶಕ್ತಿವೇಲೆ ಸೆಂಥಿಲ್ ಪ್ರಕರಣದ ತನಿಖೆ ಕೈಗೆತ್ತಿ ಕೊಂಡಿದ್ದಾರೆ. ಇಬ್ಬರು ವಾಸಿಸುತ್ತಿದ್ದ ಮನೆ ಪರಿಶೀಲನೆ ಮಾಡಿದಾಗ ಮನೆಯಲ್ಲಿ ಗಂಟು ಹಾಕಿದ ರೀತಿಯಲ್ಲಿದ್ದ ಚೂಡಿದಾರಿನ ವೇಲ್ ಸಿಕ್ಕಿದೆ.ಇವರಿಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ಉಂಟಾಗಿದ್ದು ಈ ಸಂಧರ್ಭದಲ್ಲಿ ಏನಾದರೂ ಹೆಚ್ಚು ಕಡಿಮೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.