ವಿಟ್ಲ:-ವಿಟ್ಲ ಸಮೀಪದ ಉಕ್ಕುಡ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ವಿಟ್ಲ ಲಯನ್ಸ್ ಕ್ಲಬ್, ಟೋಪ್ಕೋ ಜ್ಯುವೆಲ್ಲರಿ ವಿಟ್ಲ ಮತ್ತು ಪುತ್ತೂರು, ಬದ್ರಿಯಾ ಜುಮಾ ಮಸೀದಿ ಉಕ್ಕುಡ ಹಾಗೂ ಉಕ್ಕುಡ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ ನೋಂದಾವಣೆ ಶಿಬಿರವು 2020 ಆಗಸ್ಟ್ 27 ರಂದು ಗುರುವಾರ ಬೆಳಿಗ್ಗೆ 08 ರಿಂದ ಸಂಜೆ 04 ರ ತನಕ ನಡೆಯಲಿದೆ.
ಬೆಳಿಗ್ಗೆ 08 ರಿಂದ ಟೋಕನ್ ವಿತರಿಸಲಾಗುವುದು. ಮೊದಲು ಬಂದವರಿಗೆ ಪ್ರಥಮ ಆದ್ಯತೆ. ಯಾವುದೇ ಶುಲ್ಕವಿರುವುದಿಲ್ಲ. ಎಲ್ಲವೂ ಉಚಿತ ಸೇವೆ. ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಈ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಅವಶ್ಯಕತೆ ಇರುತ್ತದೆ. (APL/BPL ಆದರೂ ಅನ್ವಯವಾಗುತ್ತದೆ). ಉಕ್ಕುಡ ಪರಿಸರ ಮಾತ್ರವಲ್ಲದೇ ಯಾವುದೇ ಪ್ರದೇಶದ ಸಾರ್ವಜನಿಕರು ಭಾಗವಹಿಸಬಹುದು. ಫೇಸ್ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವವರು ಮಾತ್ರ ಭಾಗವಹಿಸಬಹುದು.
ಒಂದು ಕಾರ್ಡ್ ಒಬ್ಬರಿಗೆ ಮಾತ್ರ ಸೀಮಿತವಾಗಿರುತ್ತದೆ. ಅದು ಇನ್ನೊಬ್ಬರಿಗೆ ಉಪಯೋಗ ಪಡೆಯಲು ಸಾಧ್ಯವಿಲ್ಲ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು 8073736908 / 9686406915 / 9008857506 ಸಂಪರ್ಕಿಸಬಹುದು.