Friday, April 19, 2024
spot_imgspot_img
spot_imgspot_img

ಬಿ.ಸಿ.ರೋಡ್: ಆಸರೆ ಗೆಳೆಯರ ಬಳಗದ ವತಿಯಿಂದ ಪಕ್ಷಿಗಳಿಗೆ ಕಾಳು, ನೀರು ನೀಡಿ ಆಹಾರ ತಟ್ಟೆಗಳ ಹಸ್ತಾಂತರ ಕಾರ್ಯಕ್ರಮ

- Advertisement -G L Acharya panikkar
- Advertisement -

ಬಿ.ಸಿ.ರೋಡ್: ಬಿರು ಬಿಸಿಲಿನ ಬೇಗೆಗೆ ಬಳಲಿ, ಆಹಾರ ನೀರಿಗಾಗಿ ಪರಿತಪಿಸುವ ಪುಟ್ಟ-ಪುಟ್ಟ ಪಕ್ಷಿಗಳಿಗೆ ಕಾಳು, ನೀರು ನೀಡಿ ರಕ್ಷಿಸುವ ಆಸರೆ ಗೆಳೆಯರ ಬಳಗ ಬಿ.ಸಿ.ರೋಡ್ ನಲ್ಲಿ ವಲಯಾರಣ್ಯ ಅಧಿಕಾರಿ ರಾಜೇಶ್ ಬಳಿಗಾರ್ ಮತ್ತು ಉಪವಲಯಾರಣ್ಯ ಅಧಿಕಾರಿ ಪ್ರೀತಮ್ ಎಸ್ ಸಮಕ್ಷಮದಲ್ಲಿ ಅರಣ್ಯ ಇಲಾಖೆಗೆ ಮತ್ತು ಅಲ್ಲಿನ ಸಾಮಾಜಿಕ ಕಾರ್ಯಕರ್ತರಿಗೆ ನೀಡಲಾಯಿತು.

ಈ ಆಹಾರ ತಟ್ಟೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಆಸರೆ ಗೆಳೆಯರ ಬಳಗದ ಸ್ಥಾಪಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ, ತಂಡದ ಸಲಹೆಗಾರರಾದ ರಮೇಶ್ ಕುಲಾಲ್ ವಗ್ಗ, ಸದಸ್ಯರು ರಿತೇಶ್ ಕುಲಾಲ್ ಬಜ್ಪೆ, ಶುಭಕರ್ ಕುಲಾಲ್ ಕವತ್ತಾರು, ಅರುಣ್ ಕುಲಾಲ್ ಮೂಳೂರು, ಸಂತೋಷ್ ಕುಲಾಲ್ ಪದವು ಕಾರ್ಕಳ, ಸತೀಶ್ ಕಜ್ಜೋಡಿ, ವೆಂಕಟೇಶ್ ಪೂಜಾರಿ ಬಿ. ಸಿ. ರೋಡ್, ನವೀನ್ ಬಿ. ಸಿ. ರೋಡ್ ಉಪಸ್ಥಿತರಿದ್ದರೆಂದು ವರದಿಯಾಗಿದೆ.

- Advertisement -

Related news

error: Content is protected !!