- Advertisement -
- Advertisement -
ವಿಟ್ಲ: ವ್ಯಕ್ತಿಯೋರ್ವರಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ವಿಟ್ಲ ಮುಡ್ನೂರು ಗ್ರಾಮದ ನಾಟೆಕಲ್ಲುಎಂಬಲ್ಲಿ ನಡೆದಿದೆ. ಎನ್ ಗೋವಿಂದ ನಾಯ್ಕ ನೀಡಿದ ದೂರಿನಂತೆ ಜಯಪ್ರಕಾಶ್ ನಾಯಕ್ ಮತ್ತು ಭೋಜ ಎಂಬವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್ ಗೋವಿಂದ ನಾಯ್ಕ ತನ್ನ ಕೇಪು ಗ್ರಾಮದ ದೇವು ಮೂಲೆ ಎಂಬಲ್ಲಿರುವ ತೋಟಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳಾದ ಜಯಪ್ರಕಾಶ್ ನಾಯಕ್ ಮತ್ತು ಭೋಜ ಎಂಬವರುಗಳು ಹಾಲು ಉತ್ಪಾದಕರ ಸಂಘದ ಅವ್ಯಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
- Advertisement -