Thursday, March 28, 2024
spot_imgspot_img
spot_imgspot_img

ವಿನಾಯಕ ಶಂಕರ ನಾರಾಯಣ ದುರ್ಗಾಂಭ ಕ್ಷೇತ್ರ ನಂದಾವರ ಆಗಸ್ಟ್ 22 ರಂದು ಗಣೇಶ್ ಚತುರ್ಥಿ

- Advertisement -G L Acharya panikkar
- Advertisement -

ಬಂಟ್ವಾಳ:ವಿನಾಯಕ ಶಂಕರ ನಾರಾಯಣ ದುರ್ಗಾಂಭ ಕ್ಷೇತ್ರ ನಂದಾವರ ಇಲ್ಲಿ ಪ್ರತಿ ವರ್ಷ ಆಚರಿಸುವ ಗಣೇಶ್ ಚತುರ್ಥಿ ಹಬ್ಬ ಈ ಬಾರಿ ಆಗಸ್ಟ್ 22 ರಂದು ಶನಿವಾರ ಸರಕಾರದ ಮಾರ್ಗಸೂಚಿಯಂತೆ ಸಾಂಕೇತಿಕವಾಗಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

ಕೋವಿಡ್ 19. ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಂದ ಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಸರಕಾರದ ಮಾರ್ಗಸೂಚಿ ಯಂತೆ ಸಾಂಕೇತಿಕವಾಗಿ ಆಚರಣೆ ನಡೆಸಲು ತೀರ್ಮಾನ ಮಾಡಿದ್ದು , ಗಣೇಶ ಚತುರ್ಥಿ ದಿವಸ ದೇವಳದಲ್ಲಿ ಯಾವುದೇ ಸೇವೆಗಳು , ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ಇರುವುದಿಲ್ಲ.


ಭಕ್ತಾದಿಗಳಿಗೆ ಕೇವಲ ದೇವರ ದರ್ಶನ ಕ್ಕೆ ಮಾತ್ರ ಅವಕಾಶವಿದೆ ಎಂದು ತಿಳಿಸಿದೆ.
ವರ್ಷಂಪ್ರತಿ ಆಚರಿಸುವ ತೆನೆ ತುಂಬಿಸುವ ಕಾರ್ಯಕ್ರಮ ದಲ್ಲಿ ಸಾರ್ವಜನಿಕರಿಗೆ ತೆನೆ ವಿತರಣೆ ಇರುವುದಿಲ್ಲ ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಪ್ರಕಟನೆ ತಿಳಿಸಿದೆ.

- Advertisement -

Related news

error: Content is protected !!