- Advertisement -
- Advertisement -
ವಿಟ್ಲ: ಮಹಿಳೆಯೋರ್ವರು ಕಲ್ಲಕಟ್ಟ ಹೊಳೆಯ ಕಿಂಡಿ ನೀರಿನ ಹಳ್ಳಕ್ಕೆ ಜಾರಿ ಬಿದ್ದು ಮೃತಪಟ್ಟ ಘಟನೆ ವಿಟ್ಲ ಕಸಬಾ ಗ್ರಾಮದ ಕೊಲ್ಯ ಎಂಬಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ವಿಟ್ಲ ಕಸಬಾ ಗ್ರಾಮದ ಕೊಲ್ಯ ನಿವಾಸಿ ಸೀತಾರಾಮ ಶೆಟ್ಟಿಯವರ ಪತ್ನಿ ಚಂದ್ರಾವತಿ (65) ಎಂದು ಗುರುತಿಸಲಾಗಿದೆ.
ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋಗಿದ್ದ ಮಹಿಳೆ ಹೊಳೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ತನ್ನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋಗಿದ್ದ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿದ ಪರಿಣಾಮ ಹೊಳೆಯಲ್ಲಿ ಶೇಖರಣೆಯಾಗಿದ್ದ ಅಣೆಕಟ್ಟು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -