ವಿಟ್ಲ: ಚಿಕನ್ ಸೆಂಟರ್ಗೆ ಬಂದ ನಾಲ್ವರ ತಂಡ ಅಬೂಬಕ್ಕರ್ ಸಿದ್ದೀಕ್ ಎಂಬವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕ ಬದ್ರಿಯಾ ಚಿಕನ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಬೂಬಕ್ಕರ್ ಸಿದ್ದೀಕ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬದ್ರಿಯಾ ಚಿಕನ್ ಸೆಂಟರ್ನಲ್ಲಿ ಕೆಲಸ ಮಾಡಿಕೊಂಡಿರುವಾಗ ಅಪ್ರಾಝ್ @ ಅಜೀಜ್ ,ಜಲೀಲ್, ಇಶಾಮ್ ಹಾಗೂ ಫರ್ಹಾನ್ರವರು ಎಂಬವರು ಅಕ್ರಮ ಪ್ರವೇಶ ಮಾಡಿದ್ದಾರೆ. ಆರೋಪಿಗಳ ಪೈಕಿ ಅಪ್ರಾಝ್ @ ಅಜೀಜ್ನು ಗಾಂಜಾ ಸೇದುವ ವಿಚಾರವನ್ನು ಚಿಕನ್ ಸೆಂಟರ್ನ ಅಬೂಬಕ್ಕರ್ ಸಿದ್ದೀಕ್ ಬೇರೆಯವರಲ್ಲಿ ಹೇಳಿರುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೈದಿದ್ದಾರೆ.
ಇಶಾಮ್ ಎಂಬಾತ ಕಲ್ಲಿನಿಂದ ಎದೆಗೆ ಹೊಡೆದಿರುವುದಲ್ಲದೆ. ಜಲೀಲ್ ಎಂಬಾತನು ಕಲ್ಲಿನಿಂದ ಕಾಲಿಗೆ ಎಸೆದಿರುತ್ತಾರೆ. ಈ ಕೃತ್ಯದಿಂದ ಕಿವಿಯ ಭಾಗಕ್ಕೆ, ಬಲಕಾಲಿನ ಮೊಣಗಂಟಿಗೆ ರಕ್ತಗಾಯ ಹಾಗೂ ದವಡೆಯಲ್ಲಿ ಗುದ್ದಿದ ನೋವಾಗಿರುತ್ತದೆ. ನೀನು ಈ ಸಲ ಬದುಕುಳಿದಿ ನಿನ್ನನ್ನು ಮುಂದಕ್ಕೆ ಕೊಂದು ಹಾಕುತ್ತೇವೆ ಎಂದು ಹೇಳಿ ಆರೋಪಿಗಳು ಬಂದಿದ್ದ ಕಾರು ನಂಬ್ರ ಕೆಎ-19-ಎಂಸಿ-3721ನೇದರಲ್ಲಿ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಅಬೂಬಕ್ಕರ್ ಸಿದ್ದೀಕ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾಗಿ ತಿಳಿದುಬಂದಿದೆ.