Sunday, April 28, 2024
spot_imgspot_img
spot_imgspot_img

ವಿಟ್ಲ: (ಆ. 27) ಹಿಂ.ಜಾ.ವೇ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 3ನೇ ವರ್ಷದ ಹಿಂದೂ ಭಾಂದವರ ವಾರ್ಷಿಕ ಕ್ರೀಡಾಕೂಟ

- Advertisement -G L Acharya panikkar
- Advertisement -

ವಿಟ್ಲ: ಹಿಂದೂ ಜಾಗರಣ ವೇದಿಕೆ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 3ನೇ ವರ್ಷದ ಹಿಂದು ಭಾಂದವರ ವಾರ್ಷಿಕ ಕ್ರೀಡಾಕೂಟವು ಆ. 27 ರಂದು ಮಂಗಳಪದವು ಸೀಮ್ಲಾಜೆಗುತ್ತು ಮಲರಾಯ ಚಾವಡಿಯ ಎದುರಿನ ಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 9 ಕ್ಕೆ ದೀಪ ಪ್ರಜ್ವಲನದೊಂದಿಗೆ ಕ್ರೀಡಾಕೂಟ ಆರಂಭಗೊಳ್ಳಲಿದೆ ಹಾಗೂ ಹಿಂದೂ ಜಾಗರಣ ಸೇವಾನಿಧಿ ಉದ್ಘಾಟನೆಗೊಳ್ಳಲಿದೆ. ಅತಿಥಿಗಳಾಗಿ ಮೋಹನ್ ಶೆಟ್ಟಿ ಬೆಂಞತ್ತಿಮಾರ್‍ ಗುತ್ತು, ರೋಹಿತಾಶ್ವ ಭಂಗ ಮುಡಿಪಾರು, ಹೊನ್ನಪ್ಪ ಗೌಡ ಕೋಚೊಡಿ, ಶಿವಚರಣ್ ಶೆಟ್ಟಿ ಪಲೇರಿ, ವಿಮಲ ಶೆಟ್ಟಿ ಸೀಮ್ಲಾಜೆ, ವನಮಾಲ ಶೆಟ್ಟಿ ಸೀಮ್ಲಾಜೆ ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಹಿಂ.ಜಾ.ವೇ ಜಿಲ್ಲಾಕಾರಕಾರಿಣಿ ಸದಸ್ಯ ಪ್ರಶಾಂತ್ ಶೆಟ್ಟಿ, ಹಿಂ.ಜಾ.ವೇ ವಿಟ್ಲ ತಾ.ಸಂಯೋಜಕ ಹರ್ಷ ಶೆಟ್ಟಿ, ಗೋಲ್ಡನ್ ವಿಂಗ್ಸ್ ಲಿಫ್ಟ್‌&ಎಲಿವೇಟರ್‍ಸ್ ಪ್ರೈವೆಟ್ ಲಿಮಿಟೆಡ್‌ನ ಬ್ರಿಜೇಶ್ ನಾಯರ್, ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮ್‌ದಾಸ್ ಶೆಟ್ಟಿ, ಪ್ರಶಾಂತ್ ರೈ ಟೋಲ್‌ಗೇಟ್, ಪ್ರದೀಪ್ ಮಂಗಳೂರು, ದೀಪಕ್ ಶೆಟ್ಟಿ ಸೀಮ್ಲಾಜೆ, ನ್ಯೂ ಕಾಮಧೇನು ಆರ್ಥ್‌ ಮೂವರ್ಸ್‌‌ನ ಚಿತ್ತರಂಜನ್ ನೆಕ್ಕಿಲಾರ್, ಅಜಯ್ ಪೊಳಲಿ ಆರ್ಥ್ ಮೂವರ್‍ಸ್‌, ಗಣೇಶ್ ಗೌಡ ಕೈಂತಿಲ, ಸಂದೀಪ್ ಶೆಟ್ಟಿ ಅರೆಬೆಟ್ಟು ಶ್ರೀದೇವಿ ಬಿಲ್ಡರ್‍ಸ್‌ ಮಂಗಳೂರು, ಉದಯ ಬಂಗೇರ, ಯೋಗಿಶ್ ಪಿ.ನಾಯ್ಕ, ನವೀನ್ ಶೆಟ್ಟಿ ಪಾತ್ರಜಾಲ್, ಸಂತೋಷ್ ಶೆಟ್ಟಿ ನಿಟಿಲ ಕನ್‌ಸ್ಟ್ರಕ್ಷನ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.

- Advertisement -

Related news

error: Content is protected !!