Wednesday, May 8, 2024
spot_imgspot_img
spot_imgspot_img

ವಿಟ್ಲ: ಪ್ರೀತಿಸಿದ ಹುಡುಗಿಯ ಜತೆ ಮಾತನಾಡಿದ್ದಕ್ಕೆ ಮನೆಗೆ ನುಗ್ಗಿ ದಾಂಧಲೆ- ಹುಡುಗನ ತಾಯಿ ಮತ್ತು ಅಣ್ಣನಿಗೆ ಹಲ್ಲೆ, ಜೀವ ಬೆದರಿಕೆ!

- Advertisement -G L Acharya panikkar
- Advertisement -

ವಿಟ್ಲ: ಪ್ರೀತಿಸಿದ ಹುಡುಗಿಯ ಜತೆ ಮಾತನಾಡಿದಕ್ಕೆ ಮನೆಗೆ ನುಗ್ಗಿ ದಾಂಧಲೆ ಮಾಡಿ, ಹುಡುಗನ ತಾಯಿ ಮತ್ತು ಅಣ್ಣನಿಗೆ ಹಲ್ಲೆ ಮಾಡಿ- ಜೀವ ಬೆದರಿಕೆ ಹಾಕಿರುವ ಘಟನೆ ಪುಣಚ ಗ್ರಾಮದ ಬೈಲುಬರೆಂಜದಲ್ಲಿ ನಡೆದಿದೆ.

ಪುಣಚ ಗ್ರಾಮದ ಬೈಲುಬರೆಂಜ ನಿವಾಸಿ ದೀಪಕ್ ರೈ ಎಂಬ ಯುವಕನು ಅದೇ ಊರಿನ ಹುಡುಗಿಯೊಬ್ಬಳನ್ನು ಪ್ರೀತಿಸಿತ್ತಿದ್ದನು. ಕೆಲವು ಸಮಯಗಳ ಹಿಂದೆ ಆ ಹುಡಿಗಿಗೆ ಬೇರೊಬ್ಬ ಯುವಕನೊಂದಿಗೆ ವಿವಾಹವಾಗಿದ್ದು, ನಂತರ ದೀಪಕ್ ರೈ ಆ ಹುಡುಗಿಯ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಎಂಬ ವಿಚಾರಕ್ಕೆ ಹುಡುಗಿಯ ಸಂಬಂಧಿಕರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.

ಫೆ.4 ರಂದು ರಾತ್ರಿ ಹುಡುಗಿಯ ತಂದೆ ರಾಜು, ಅಣ್ಣ ರಕ್ಷಿತ್‌, ನೆರೆಕರೆಯ ಲೊಕೇಶ್ ಎಂಬವರು ಬೈಲುಬರೆಂಜದಲ್ಲಿರುವ ದೀಪಕ್ ರೈ ಯವರ ಮನೆಗೆ ಬಂದು ಹುಡುಗಿಯ ಬಳಿ ಪೋನ್ ನಲ್ಲಿ ಮಾತಾನಾಡಬೇಡ ಎಂದು ಎಚ್ಚರಿಕೆ ನೀಡಿ ತೆರಳಿದ್ದರು.

ಬಳಿಕ ಅದೇ ದಿನ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ದೀಪಕ್ ರೈ ಯವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ದೀಪಕ್ ರೈಯವರಿಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ.ಆ ವೇಳೆ ದೀಪಕ್ ರೈ ಯವರ ತಾಯಿ ಮಗನಿಗೆ ಹೊಡೆಯುದನ್ನು ಬಿಡಿಸಲು ಬಂದಾಗ ಅವರನ್ನು ನೆಲಕ್ಕೆ ದೂಡಿ ಹಾಕಿ, ದೀಪಕ್ ರೈ ಯವರ ಅಣ್ಣನಿಗೂ ಹಲ್ಲೆ ನಡೆಸಿದ್ದಾರೆ.

ಬಳಿಕ ಬೊಬ್ಬೆ ಕೇಳಿ ನೆರೆಯವರು ಬರುವುದನ್ನು ಗಮನಿಸಿದ ತಂಡ ಅಲ್ಲಿಂದ ಕಾಲ್ಕಿತ್ತಿದ್ದಾರೆ.ಹೊಗುವಾಗ ನಮ್ಮ ಹುಡುಗಿಗೆ ಇನ್ನು ಫೋನ್ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ.

ಗಾಯಗೊಂಡ ದೀಪಕ್ ರೈ ಮತ್ತು ಆತನ ತಾಯಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿದೆ. ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!