Thursday, April 25, 2024
spot_imgspot_img
spot_imgspot_img

ವಿಟ್ಲ: NS ಕ್ರಷರ್ ಮಾಲಕರಿಗೆ ಜೀವ ಬೆದರಿಕೆ; ಬ್ಲೇಡ್ ಸಾದಿಕ್ ಸೇರಿ ಮೂವರ ವಿರುದ್ಧ ಕೇಸು ದಾಖಲು

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಎನ್ ಎಸ್ ಕ್ರಷರ್ ಘಟಕಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಾಲಕರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಘಟನೆ ವಿಟ್ಲ ಮುಡ್ನೂರು ಗ್ರಾಮದ ಕಂಬಳಿ ಮೂಲೆ ಎಂಬಲ್ಲಿ ನಡೆದಿದೆ.

ವಿಟ್ಲ ಮುಡ್ನೂರು ಗ್ರಾಮದ ಎನ್‌ ಎಸ್‌ ಅಬ್ದುಲ್‌ ಕುಂಞ ಎಂಬವರಿಗೆ ಸೇರಿದ ಎನ್ ಎಸ್ ಕ್ರಷರ್ ಘಟಕಕ್ಕೆ ಜೂ. 12 ರಂದು ಕಾರಿನಲ್ಲಿ ಬಂದು ಅಕ್ರಮವಾಗಿ ಕಚೇರಿ ಒಳಕ್ಕೆ ನುಗ್ಗಿದ ಸಫ್ರೀನ್ ಹಾಗೂ ಇನ್ನೋರ್ವ ವ್ಯಕ್ತಿ ಮ್ಯಾನೇಜರಗಳಾದ ರವಿಚಂದ್ರ ಹಾಗೂ ಯಾಸೀನ್‌ ಎಂಬವರಲ್ಲಿ ನೀವು ಕ್ರಷರ್ ವ್ಯವಹಾರ ನಮಗೆ ನೀಡಬೇಕು ಇಲ್ಲದಿದ್ದರೆ ನಿಮ್ಮ ಧಣಿಯನ್ನು ಜೀವಂತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಸಾದಿಕ್ ಎಂಬಾತ ತಮ್ಮನ್ನು ಕಳುಹಿಸಿರುವುದಾಗಿ ಹೇಳಿದ್ದಾರೆ.

ಬಳಿಕ ಎನ್ ಎಸ್ ಕ್ರಷರ್ ನ ಮಾಲಕರಾದ ಅಬ್ದುಲ್ ಕುಂಞ ಯವರಿಗೆ ಕರೆ ಮಾಡಿ “ನನಗೆ ನಿಮ್ಮ ಕ್ರಷರ್ ನಲ್ಲಿ ವ್ಯವಹಾರದ ಪಾಲುದಾರಿಕೆ ನೀಡಬೇಕು” ನೀನು ಈಶ್ವರ ಮಂಗಲದಿಂದ ಬಂದು ಈ ಊರಿನಲ್ಲಿ ವ್ಯವಹಾರ ಹೇಗೆ ನಡೆಸುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ಅಲಿಯಾಸ್ ಬ್ಲೇಡ್ ಸಾದಿಕ್ ಎಂಬಾತನನ್ನು ಈ ಮೊದಲೇ ಒಂದು ಪ್ರಕರಣದಲ್ಲಿ ವಿಟ್ಲ ಪೊಲೀಸ್ ಠಾಣಾ ಎಎಸ್ಐ ವಿನೋದ್ ರೆಡ್ಡಿಯವರು ಬೆಂಡೆತ್ತಿದ್ದರು. ಆ ಬಳಿಕ ಆತ ಬೆಂಗಳೂರಿಗೆ ಓಡಿ ಹೋಗಿದ್ದು, ಇದೀಗ ವಿನೋದ್ ರೆಡ್ಡಿಯವರು ರಜೆಯಲ್ಲಿರುವಸಂದರ್ಭವನ್ನು ಉಪಯೋಗಿಸಿಕೊಂಡು ತನ್ನ ಕೆಲಸವನ್ನು ಮತ್ತೆ ಪ್ರಾರಂಭಿಸಿದ್ದಾನೆ ಎಂದು ತಿಳಿದು ಬರುತ್ತಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Related news

error: Content is protected !!