ವಿಟ್ಲ: ಕನ್ಯಾನ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ವಿಜಯೋತ್ಸವ ಮೆರವಣಿಗೆ ವೇಳೆ ರಿಕ್ಷಾ ಅಡ್ಡ ದಿಡ್ಡಿಯಾಗಿ ಚಲಾಯಿಸಿದ್ದಾರೆ ಎಂದು ಆರೋಪಿಸಿ ತಂಡಯೊಂದು ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಕರೀಂ ಅವರ ಪುತ್ರ ಸಾದಿಕ್ ಅವರು ಹಲ್ಲೆಗೊಳಗಾಗಿದ್ದಾರೆ,ಇವರನ್ನು ತುಂಬೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಗಳಾದ ರಿಕ್ಷಾ ಉಮ್ಮರ್, ಭಾತಿಷ್, ಆರಿಸ್ ಕುಕ್ಕಾಜೆ, ಮಜೀದ್, ಕೆ ಪಿ ಅಬ್ದುಲ್ ರಹಿಮಾನ್, ಸಾಬಿತ್, ಇಸ್ಮಾಲಿ ಕುಕ್ಕಾಜೆ, ಆಸೀಫ್, ವಾಜಿಪಾಯಿ ನಾಸೀರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚಾಲಕ ಸಾದಿಕ್ ಅವರು ಕನ್ಯಾನ ಗ್ರಾಮದ ಕನ್ಯಾನ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಬಳಿ ರಸ್ತೆಯಲ್ಲಿ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕನ್ಯಾನ ಕಡೆಯಿಂದ ಕನ್ಯಾನ ಪೇಟೆ ಕಡೆಗೆ ಕನ್ಯಾನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆ ತೆರಳುತ್ತಿದ್ದಾಗ ವಿರುದ್ದ ದಿಕ್ಕಿನಿಂದ ಸಾದಿಕ್ ಆಟೊ ಚಲಾಯಿಸಿ ಬರುತ್ತಿದ್ದ ಆಟೋ ರಿಕ್ಷಾವನ್ನು ಆರೋಪಿಗಳಾದ ರಿಕ್ಷಾ ಉಮ್ಮರ್, ಭಾತಿಷಾ, ಆರೀಸ್ ಕುಕ್ಕಾಜೆ, ಮಜೀದ್, ಕೆ.ಪಿ ಅಬ್ದುಲ್ ರಹೀಮಾನ್, ಸಾಬೀತ್ ,ಇಸ್ಮಾಲಿ ಕುಕ್ಕಾಜೆ, ಅಸೀಪ್, ವಾಜಿಪಾಯಿ ನಾಸೀರ್ ಅವರು
ದೊಣ್ಣೆಯನ್ನು ಹಿಡಿದುಕೊಂಡು ಸಾದಿಕ್ ಅವರ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಮೆರವಣಿಗೆ ಮಾಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೂ ನಿನ್ನ ರಿಕ್ಷಾವನ್ನು ಬದಿಗೆ ನಿಲ್ಲಿಸು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಉಮ್ಮರ್ ಎಂಬಾತ ಆಟೋ ರಿಕ್ಷಾದಿಂದ ಎಳೆದು ಹಾಕಿ ತನ್ನ ಕೈಯಲ್ಲಿ ಇದ್ದ ಮರದ ಕೋಲಿನಿಂದ ಹೊಡೆದಿದ್ದಾರೆ ಎಂದು ಗಾಯಾಳು ಆರೋಪಿಸಿದ್ದಾರೆ. ಈ ಸಂದರ್ಭ ಅಬ್ದುಲ್ ಸತ್ತಾರ್ ಮತ್ತು ಸುಲೈಮಾನ್ ಅವರು ಬರುವುದನ್ನು ಕಂಡು ಆರೋಪಿಗಳು ಹೊರಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.