ವಿಟ್ಲ: ಕೇರಳಕ್ಕೆ ಅಕ್ರಮ ಒಳರಸ್ತೆ ಇರುವ ಸಮೀಪದಲ್ಲೇ ಅನ್ಯಮತೀಯ ವ್ಯಕ್ತಿಯಿಂದ ದನದ ಫಾರ್ಮ್ ಪ್ರಾರಂಭ.!!? ಹಿಂದೂ ಸಂಘಟನಾ ಕಾರ್ಯಕರ್ತರ ಆಕ್ರೋಶ

0
791

ವಿಟ್ಲ: ಕೇರಳಕ್ಕೆ ಅಕ್ರಮ ಒಳರಸ್ತೆ ಇರುವ ಸಮೀಪದಲ್ಲೇ ಅನ್ಯಮತೀಯ ವ್ಯಕ್ತಿಯಿಂದ ದನದ ಫಾರ್ಮ್ ಪ್ರಾರಂಭಿಸುವ ಹುನ್ನಾರ ನಡೆಯುತ್ತಿದೆ ಎಂದು ಹಿಂದೂ ಸಂಘಟನಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತ ಪಡಿಸಿದ ಘಟನೆ ಪುಣಚದಲ್ಲಿ ನಡೆದಿದೆ.

ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈರಿಕಟ್ಟೆ ಎಂಬಲ್ಲಿ ಕೇರಳಕ್ಕೆ ಅಕ್ರಮ ಒಳರಸ್ತೆ ಇರುವ ಸಮೀಪದಲ್ಲೇ ಅನ್ಯಮತೀಯ ಒಬ್ಬ ವ್ಯಕ್ತಿ ದನದ ಫಾರ್ಮ್ ಪ್ರಾರಂಭಿಸುವ ಹುನ್ನಾರ ನಡೆಯುತ್ತಿದ್ದು ಇದು ಕಾರ್ಯಾಚರಣೆಗೆ ಬಂದರೆ ಕೇರಳಕ್ಕೆ ಅಕ್ರಮವಾಗಿ ಕಸಾಯಿಖಾನೆಗೆ ಗೋಸಾಗಟ ನಡೆಯುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಉದ್ಧೇಶದಿಂದ ಇದರ ವಿರುದ್ಧ ಸ್ಥಳೀಯ ಹಿಂದೂ ಸಂಘಟನಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಪುಣಚ ಗ್ರಾಮ ಪಂಚಾಯತ್ ನಲ್ಲಿ ದೂರು ನೀಡಿದ್ದಾರೆ.

ಈ ಧರ್ಮ ವಿರೋಧಿ ಕಾರ್ಯ ಮುಂದುವರಿಸಿದರೆ ಇದರ ವಿರುದ್ಧ ಹೋರಾಟ ಮಾಡಲು ಹಿಂದೂ ಸಮಾಜ ಸಿದ್ಧವಿದೆ ಎಂದು ಹಿಂದೂ ಸಂಘಟನ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಸರಿಯಾದ ಕ್ರಮಕೈಗೊಳ್ಳುವಂತೆ ಪುಣಚ ಗ್ರಾಮ ಪಂಚಾಯತ್ ನಲ್ಲಿ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ ವಿಟ್ಲ ತಾಲೂಕಿನ ಹಿಂದೂ ಸಂಘಟನ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.