- Advertisement -
- Advertisement -
ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಆಚರಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಉದಯಶಂಕರ ನೀರ್ಪಾಜೆ, ವಿ ಟಿ ಪ್ರಸಾದ್, ವಿಷ್ಣುಗುಪ್ತ ಪುಣಚ, ಮಹಮ್ಮದ್ ಆಲಿ ವಿಟ್ಲ ಮತ್ತು ನಿಶಾಕಿರಣ್ ಬಾಳೆಪುಣಿ ಯವರನ್ನು ಸನ್ಮಾನಿಸಲಾಯಿತು.
ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರಿನ ಸಭಾ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ನಿಕಟಪೂರ್ವ ರಾಜ್ಯಪಾಲಕ ಡಾ. ಗೀತಪ್ರಕಾಶ್, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲತಡ್ಕ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ಉಪಾಧ್ಯಕ್ಷ ಸುದೇಶ್ ಭಂಡಾರಿ, ಸದಸ್ಯರುಗಳಾದ ಮಂಗೇಶ್ ಭಟ್, ಮಹಮ್ಮದ್ ಇಕ್ಬಾಲ್, ರವಿಶಂಕರ್, ಹರ್ಶಿತ್, ಲಿಯೋ ಅಧ್ಯಕ್ಷೆ ಯುಕ್ತಾ ಉಪಸ್ಥಿತರಿದ್ದರು.
- Advertisement -