- Advertisement -
- Advertisement -
ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಇದರ ಸಪ್ಟೆಂಬರ್ ಬುಲೆಟಿನ್ ವಿಟಾಲಯನ್ ಸಂಚಿಕೆಯನ್ನು ಸಾಮಾನ್ಯ ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಲಯನ್ಸ್ ಜಿಲ್ಲೆ 317ಡಿ ಇದರ ನಿಕಟ ಪೂರ್ವ ಗವರ್ನರ್ .ಡಾ ಗೀತಾಪ್ರಕಾಶ್ ಬಿಡುಗಡೆ ಮಾಡಿದರು. ಬಿಡುಗಡಾ ಕಾರ್ಯಕ್ರಮವು ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ಕಚೇರಿಯಲ್ಲಿ ನಡೆಯಿತು
ಸಭೆಯಲ್ಲಿ ಡಾ. ಶರತ್ಚಂದ್ರ ಶೆಟ್ಟಿ, ವಿಟಾಲಯನ್ ಸಂಪಾದಕರಾದ ರಮೇಶ್ ಬಾಯರ್, ಸಹ ಸಂಪಾದಕರಾದ ಜಾಲಜಾಕ್ಷಿ ಬಿ ಗೌಡ ಹಾಗೂ ಲಯನ್ಸ್ ಅಧ್ಯಕ್ಷರಾದ ಮೋನಪ್ಪ ಗೌಡ, ಕಾರ್ಯದರ್ಶಿ ಲುವಿಸ್ ಯಂ ,ಕೋಶಾಧಿಕಾರಿ ಗಂಗಾಧರ್ ಹಿರಿಯ ಲಯನ್ಸ್ ಸದಸ್ಯರಾದ ಜನಾರ್ಧನ್ ಯಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
- Advertisement -