Saturday, April 20, 2024
spot_imgspot_img
spot_imgspot_img

ವಿಟ್ಲ ನಿವಾಸಿಯಿಂದ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ-ಆರೋಪಿಯ ಬಂಧನಕ್ಕೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಗ್ರಹ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಕಂಬಳಬೆಟ್ಟು ನಿವಾಸಿ ರಿಜ್ವಾನ್ ಖಾನ್ ಎಂಬಾತ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣವನ್ನು ಖಂಡಿಸಿ ,ಆತನನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡದಿಂದ ದೂರು ನೀಡಿದರು.

ವಿಟ್ಲ ಕಂಬಳಬೆಟ್ಟು ನಿವಾಸಿ ರಿಜ್ವಾನ್ ಖಾನ್ ಎಂಬಾತ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಮತ್ತು ತುಚ್ಛ ಶಬ್ದ ಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದು. ಹಿಂದೂ ಧರ್ಮದ ಕುರಿತು ನಿರಂತರವಾಗಿ ನಿಂದಿಸುವ ಕೆಲಸ ಮಾಡುತ್ತಿದ್ದಾನೆ.

ಇವನು ಹೇಳೋ ಪ್ರಕಾರ ಸನಾತನ ಧರ್ಮ ಅಂದ್ರೆ ಅದು ಇಸ್ಲಾಂ ಮಾತ್ರ ಅಂತೆ, ಹಿಂದೂ ಧರ್ಮ ಸನಾತನ ಅಲ್ಲವಂತೆ!! ಹಿಂದೂ ಧರ್ಮವೆಂಬುದೇ ಇಲ್ಲವಂತೆ!! ಇಸ್ಲಾಮೇತರ ಧರ್ಮಗಳೆಲ್ಲಾ ಕೇವಲ ಕಾಲ್ಪನಿಕವಂತೆ!.

ಮುಖ್ಯವಾಗಿ ಇವನು ಸಂವಿಧಾನಕ್ಕೆ ವಿರುದ್ಧವಾಗಿ ಹಿಂದೂ ದೈವ ದೇವರುಗಳ ಬಗ್ಗೆ ತುಚ್ಛವಾಗಿ ಮಾತನಾಡುತ್ತಾ ಹಿಂದೂ ದೇವರುಗಳು ಕಾಮುಕರು, ರೇಪಿಸ್ಟ್ ಗಳು ಎಂದು ಅಸಹ್ಯವಾಗಿ ನಿಂದಿಸುತ್ತಿದ್ದಾನೆ. ಈತನನ್ನು ಬಂಧಿಸಿ ಆತನಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿ ವಿಟ್ಲ ಪೊಲೀಸ್ ಠಾಣೆಗೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡದಿಂದ ದೂರು ನೀಡಿದರು.

ದೂರನ್ನು ಸ್ವೀಕರಿಸಿದ ವಿಟ್ಲ ಠಾಣಾ ನಿರೀಕ್ಷಕರಾದ ವಿನೋದ್ ರೆಡ್ಡಿಯವರು “ಆತನನ್ನು ತಕ್ಷಣ ಬಂಧಿಸಿ ಆತನಿಗೆ ತಕ್ಕ ಶಿಕ್ಷೆ ನೀಡುತ್ತೇವೆ” ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ಇವರಿಗೆ ಭರವಸೆ ನೀಡಿದರು .ಈ ಸಂಧರ್ಭ ದಲ್ಲಿ ಪ್ರಖಂಡದ ಸಂಚಾಲಕರಾದ ಮಿಥುನ್ ಕಲ್ಲಡ್ಕ ಕಾರ್ಯದರ್ಶಿ ಚರಣ್ ಕಾಪುಮಜಲ್, ಮನೋಜ್ ಕಾಶೀಮಠ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!