- Advertisement -
- Advertisement -
ವಿಟ್ಲ: ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವಿಟ್ಲ ಇದರ ವತಿಯಿಂದ ಬಡ ಹೆಣ್ಣು ಮಗಳು ಸೌಜನ್ಯ ಸಾವಿನ ನ್ಯಾಯಕ್ಕಾಗಿ ಸೌಜನ್ಯ ಪ್ರಕರಣವನ್ನು SIT ತನಿಖೆಗೆ ಆಗ್ರಹಿಸಿ ಈ ಹಿಂದೆ ತನಿಖೆಯನ್ನು ಹಳ್ಳ ಹಿಡಿಸಿದ ತನಿಖಾಧಿಕಾರಿಗಳನ್ನು, ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರ ತನಿಖೆಗಾಗಿ, ಸೌಜನ್ಯಳನ್ನು ಕೊಂದು ಮುಗಿಸಿದ ನಿಜವಾದ ರಕ್ತಪಿಪಾಸು ಅಪರಾಧಿಗಳನ್ನು ಶಿಕ್ಷಿಸುವಂತೆ ಆಗ್ರಹಿಸಿ ಪ್ರತಿಭಟನಾ ಸಭೆಯು ಸೆ.24ರಂದು ಸಂಜೆ 3.30ರಿಂದ ವಿಟ್ಲ ಬಸ್ಸ್ಟ್ಯಾಂಡ್ ಬಳಿ ನಡೆಯಲಿದೆ.
ಈ ಪ್ರತಿಭಟನಾ ಸಭೆಯಲ್ಲಿ ಸೌಜನ್ಯ ಕುಟುಂಬ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ನ್ಯಾಯಪರ ಹೋರಾಟಗಾರರು ಭಾಗವಹಿಸಲಿದ್ದಾರೆ.
ಪ್ರತಿಭಟನಾ ಮೆರವಣಿಗೆಯು ವಿಟ್ಲದ ರಥದ ಗದ್ದೆಯ ಬಳಿಯಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -