ವಿಟ್ಲಾ: ವಿಟ್ಲಾ ಪೇಟೆಯಲ್ಲಿ ಕಳೆದ 7 ವರ್ಷಗಳಿಂದ ಟೂ ವಿಲರ್ ಆಟೋ ಮೊಬೈಲ್ಸ್ ನಲ್ಲಿ ಹೊಸ ಕ್ರಾಂತಿ ಎಬ್ಬಿಸಿ, ಹೊಸತನದ ಇತಿಹಾಸ ನಿರ್ಮಿಸಿದ ಶ್ರೀ ದುರ್ಗಾ ರಾಜ್ ಆಟೋಮೊಬೈಲ್ಸ್ ಎಂಬ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಶಿವಶಕ್ತಿ ಎಂಟರ್ ಪ್ರೈಸರ್ಸ್ ಎಂಬ ನೂತನ ಮಳಿಗೆಯು ಇಂದು ವಿಟ್ಲಾದ ಬೊಬ್ಬೆಕೇರಿಯ ರವಿಕಿರಣ ಕಾಂಪ್ಲೆಕ್ಸ್ ನಲ್ಲಿ ಗಣಪತಿ ಹೋಮ ಮತ್ತು ಲಕ್ಷ್ಮೀ ಪೂಜೆ ಮೂಲಕ ನೂತನವಾಗಿ ಶುಭಾರಂಭಗೊಂಡಿತು.
ನಂತರ ನೂತನ ಮಳಿಗೆಯ ಮಾಲಕರಾದ ಗಣೇಶ್ ಪ್ರಸಾದ್ ಮಾತನಾಡಿ, ಹೊಸ ಮಳಿಗೆಯಲ್ಲಿ ಎಲ್ಲಾ ತರದ ಆಯ್ದ ಬ್ಯಾಟರಿಗಳ ಮಾರಾಟ ಮತ್ತು ಸೇವೆ, ಎಲ್ಲಾ ಶೈಲಿಯ ಹೆಲ್ಮೆಟ್, ಸೀಟ್ ಕವರ್, LED ಲೈಟ್ ಗಳು ಹಾಗೂ ಇನ್ನಿತರ ದ್ವಿಚಕ್ರ ವಾಹನಗಳ ಅಲಂಕಾರಿಕ ವಸ್ತುಗಳ ಜೊತೆಗೆ ಜೀವ ವಿಮೆ, ಎಲ್ಲಾ ವಾಹನಗಳ ಇನ್ಸೂರೆನ್ಸ್ ಗಳು ಲಭ್ಯವಿದೆ ಎಂದು ತಿಳಿಸಿದರು.
ಇದರ ಪ್ರಯೋಜನವನ್ನು ಎಲ್ಲಾ ಗ್ರಾಹಕ ಬಂಧುಗಳು ಬಳಸಿಕೊಂಡು ನಮ್ಮೊಂದಿಗೆ ಸಹಕರಿಸಿಕೊಳ್ಳಬೇಕಾಗಿ ವಿನಂತಿಸಿದ್ದಾರೆ. ಈ ನೂತನ ಮಳಿಗೆಗೆ ಎಲ್ಲಾ ವಿಭಾಗದ ಮೆಕ್ಯಾನಿಕ್ಸ್ ಗಳು, ಗಣ್ಯರು, ಬ್ಯಾಂಕ್ ಸಿಬ್ಬಂದಿ ಕೀರ್ತಿ ಶಂಕರ, ದುರ್ಗಾ ರಾಜ್ ಆಟೋ ಮೊಬೈಲ್ಸ್ ನ ಮಾಲಕಾರದ ಹರಿಪ್ರಸಾದ್ ಸಹೋದ್ಯೋಗಿಗಳಾದ ರೂಪೇಶ್, ರಂಜಿತ್ ಶುಭ ಹಾರೈಸಿದರು.
ವರದಿ ರೂಪೇಶ್ ವಿಟ್ಲಾ..