ವಿಟ್ಲ: ವಿಟ್ಲ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆಯು ವಿಟ್ಲ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸಂಘದ ಅಧ್ಯಕ್ಷ ಹರೀಶ್ ಸಿ.ಹೆಚ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮಾಧವ ಪೂಜಾರಿ ಪಟ್ಲ, ಗೌರವಾಧ್ಯಕ್ಷರಾಗಿ ಬಾಬು ಕೆ.ವಿ., ಕಾರ್ಯದರ್ಶಿಯಾಗಿ ಲಕ್ಷ್ಮಣ ಪೂಜಾರಿ ಎಸ್. ವಿಟ್ಲ, ಜತೆ ಕಾರ್ಯದರ್ಶಿಯಾಗಿ ರಮೇಶ್ ಕುಮಾರ್ ಆರ್.ಎಸ್., ಉಪಾಧ್ಯಕ್ಷರಾಗಿ ಗಂಗಾಧರ ಪೂಜಾರಿ ನಿಡ್ಯ, ಅಶೋಕ ಪೂಜಾರಿ ಮಚ್ಚ, ಜಯ ಪ್ರಕಾಶ್ ಪಾಣೆಮಜಲು, ಕೋಶಾಧಿಕಾರಿಯಾಗಿ ಸುಧಾಕರ ಪೂಜಾರಿ ಕೇಪು, ಸಂಘಟನ ಕಾರ್ಯ ದರ್ಶಿಯಾಗಿ ಮೋನಾಕ್ಷ ಆಯ್ಕೆಗೊಂಡರು.
ಗೌರವ ಸಲಹೆಗಾರರಾಗಿ ಹಿರಿಯ ಸದಸ್ಯ ಪ್ರಕಾಶ್ ವಿಟ್ಲ, ಸಂಜೀವ ಪೂಜಾರಿ ಗಜಾನನ, ದೇಜಪ್ಪ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ನಿಡ್ಯ, ಚಂದ್ರಹಾಸ ಸುವರ್ಣ, ಜಗದೀಶ ಪಾಣೆಮಜಲು, ಹರೀಶ್ ಸಿ.ಎಚ್. ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಮೇಶ್ ಕೊಪ್ಪಳ, ಬಾಲಕೃಷ್ಣ ಪೂಜಾರಿ ಪಟ್ಲ, ನಾರಾಯಣ ಪೂಜಾರಿ ಕುಕ್ಕಾಜೆ, ಪ್ರವೀಣ್ ಸಣ್ಣಗುತ್ತು, ಶ್ರೇಯಸ್ ಮಂಗಳಪದವು, ಸಚಿತ್ ಕುಮಾರ್, ಜಗದೀಶ ಅನ್ನಮೂಲೆ, ಹರಿಪ್ರಸಾದ್, ಪ್ರವೀಣ್ ಸಾಲಿಯಾನ್, ಯಶೋಧರ ಪಟ್ಲ ಆಯ್ಕೆಗೊಂಡಿದ್ದಾರೆ