ವಿಟ್ಲ: ನವಭಾರತ ಮೋಟಾರ್ ಡ್ರೈವಿಂಗ್ ಸ್ಕೂಲ್ ನ ಉದ್ಘಾಟನಾ ಸಮಾರಂಭವು 9/1/2021 ರ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ವಿಟ್ಲ- ಪುತ್ತೂರು ಮೈನ್ ರೋಡಿನಲ್ಲಿರುವ ವಿ. ಹೆಚ್. ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ನವಭಾರತ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭಗೊಳ್ಳಲಿದೆ.
ನವಭಾರತ ಮೋಟಾರ್ ಡ್ರೈವಿಂಗ್ ಸ್ಕೂಲ್ ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ “ಸಂಜೀವ ಮಠಂದೂರು” ರವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃಷ್ಣಯ್ಯ ಕೆ ಅರಮನೆ ವಿಟ್ಲ, ಬಂಟ್ವಾಳದ ಎ.ಆರ್.ಟಿ.ಒ ಜಾನ್ ಮಿಸ್ಕಬ್, ಬಿ. ಎ. ಅಬ್ದುಲ್ಲಾ ಮದನಿ ಮಂಗಿಲಪದವು ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಮಯಂತಿ, ವಿಟ್ಲ ಪಟ್ಟಣ ಪಂಚಾಯತ್ ನ ಚೀಫ್ ಆಫೀಸರ್ ಶ್ರೀಮತಿ ಮಾಲಿನಿ, ವಿಟ್ಲ ಠಾಣಾ ಪಿ.ಎಸ್.ಐ ವಿನೋದ್ ರೆಡ್ಡಿ, ವಿಟ್ಲ ಶ್ರೀ ದತ್ತ ಕೃಪಾ ಫೈನಾನ್ಸ್ ನ ಶ್ರೀಧರ್ ಶೆಟ್ಟಿ ಗುಬ್ಯ, ವಿಟ್ಲ ವಿ ಟಿವಿ ನ್ಯೂಸ್ ನಿರ್ದೇಶಕರಾದ ರಾಮ್ ದಾಸ್ ಶೆಟ್ಟಿ, ರಾಜಾರಾಮ್ ಶೆಟ್ಟಿ ಕೋಲ್ಪೆ ಗುತ್ತು, ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ.
ಬಂಟ್ವಾಳ ತಾಲೂಕು ಎಸ್.ಡಿ.ಪಿ.ಐ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ವಿಟ್ಲ ಠಾಣಾ ಕ್ರೈಂ ಸೆಕ್ಷನ್ ನ ಪ್ರತಾಪ್ ರೆಡ್ಡಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಶಮೀರ್ ಪಳಿಕೆ, ವಿಟ್ಲ ಪ್ರೆಸ್ ರಿಪೋರ್ಟರ್ ಮಹಮ್ಮದ್ ಆಲಿ, ವಿ.ಹೆಚ್ ಕಾಂಪ್ಲೆಕ್ಸ್ ನ ಮಾಲಕರಾದ ಅಶ್ರಫ್ ವಿ. ಹೆಚ್ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪಾಲುದಾರರಾದ ನವೀದ್ ವಿಟ್ಲ ಮತ್ತು ಸುಮಿತ್ ಕಾರ್ಯ್ಯಾಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.