- Advertisement -
- Advertisement -


ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ವಿಟ್ಲ ನಾಡಕಛೇರಿಗೆ ನೂತನ ಕಟ್ಟಡ ಕಾಮಗಾರಿಗೆ ಕಂದಾಯ ಇಲಾಖೆ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 23.84 ಲಕ್ಷ ಅನುದಾನ ಬಂದಿದ್ದು ಇಂದು ಶಿಲನ್ಯಾಸ ಕಾರ್ಯಕಮ ನಡೆಯಿತು.

ಶಿಲಾನ್ಯಾಸವನ್ನು ಶಾಸಕ ಸಂಜೀವ ಮಠಂದೂರು, ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ ರಾಮು, ನಿರ್ಮಿತಿ ಕೇಂದ್ರದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ರಾಜೇಂದ್ರ ಕಳಬಾಯಿ ನೆರವೇರಿಸಿದರು.
ಗುದ್ದಲಿ ಪೂಜೆಯ ವೇಳೆ ಉಪತಹಶೀಲ್ದಾರ್, ವಿಟ್ಲ ವಲಯ ಕಂದಾಯ ನೀರಿಕ್ಷಕರು, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಗ್ರಾಮ ಸಹಾಯಕರು, ಸಿಬ್ಬಂದಿಗಳು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.







- Advertisement -








