ವಿಟ್ಲ: ಶ್ರೀ ಎನರ್ಜಿ ಸೋಲಾರ್ ಸಂಸ್ಥೆ ಸ್ಥಳಾಂತರಗೊಂಡು ವಿಟ್ಲ ಬೊಬ್ಬೆಕೇರಿಯ ಆಶೀರ್ವಾದ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ಬೆಳಗ್ಗೆ ಗಣಪತಿ ಹವನ ನಡೆದು ಬಳಿಕ ಸಂಸ್ಥೆಯ ಉದ್ಘಾಟನೆ ನಡೆಯಿತು. ಪ್ರಕಾಶ್ ನಾರಾಯಣ ಜೆಡ್ಡು, ವಕೀಲರು ಬಿ.ಸಿ.ರೋಡ್ ಹಾಗೂ ನಿವೃತ್ತ ಅಧ್ಯಾಪಕರು ತಿರುಮಲೇಶ್ವರ ಭಟ್ ರಿಬ್ಬನ್ ಕತ್ತರಿಸಿ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು, ಸಿಬ್ಬಂದಿ ಸೇರಿದಂತೆ ಹಲವು ಗಣ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.
ಶ್ರೀ ಎನರ್ಜಿ ಸೋಲಾರ್ ಸಂಸ್ಥೆಯಲ್ಲಿ ಮಿಕ್ಸಿ, ಗ್ಯಾಸ್ ಸ್ಟವ್, ಇಂಡಕ್ಷನ್ ಸ್ಟವ್, ಎಲ್ಲಾ ತರಹದ ಫ್ಯಾನ್ಗಳು , ಎರ್ ಕೂಲರ್, ಎಸಿ ಇನ್ವರ್ಟರ್ ಬ್ಯಾಟರಿ, ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟಿಂಗ್ಸ್ , ವಾಟರ್ ಫ್ಯೂರಿಫಯರ್, ಇತ್ಯಾದಿ ಮಾರಾಟ ಮತ್ತು ನಿರ್ವಹಣೆ ಸೇವೆಗಳು ಲಭ್ಯವಿದೆ. ಯುಗಾದಿ ಹಾಗೂ ಶುಭಾರಂಭದ ಪ್ರಯುಕ್ತ ಎಲ್ಲಾ ಸೇವೆಗಳಿಗೆ 10% ರಿಂದ 20% ರಿಯಾಯಿತಿ ದರ ನೀಡಲಾಗುವುದು. ಹಾಗೂ ತಿಂಗಳಿಗೆ 1000/- ಕಟ್ಟುವ ಕಂತು ಬೆನಿಫಿಟ್ ಸ್ಕೀಮ್ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9008604927, 9164321927