Sunday, May 5, 2024
spot_imgspot_img
spot_imgspot_img

ವಿಟಿವಿ ವರದಿ ಫಲಶ್ರುತಿ: ಮರದಲ್ಲಿ ನೇತಾಡುತ್ತಿದ್ದ ತ್ರೀ ಫೇಸ್ ವಿದ್ಯುತ್ ಬೋರ್ಡಿಗೆ ಕೊನೆಗೂ ಮುಕ್ತಿ

- Advertisement -G L Acharya panikkar
- Advertisement -

ಅಮಾಯಕರ ಪ್ರಾಣದಲ್ಲಿ ಚೆಲ್ಲಾಟವಾಡ್ತಿದ್ದ ವೀರಕಂಬ ಗ್ರಾಮ ಪಂ.ನ ಎಚ್ಚರಿಸಿದ ವಿಟಿವಿ ವರದಿ

ವಿಟ್ಲ : ವೀರಕಂಬ ಗ್ರಾಮ ಪಂ.ವ್ಯಾಪ್ತಿಯ ಬೆತ್ತಸರವು ರಸ್ತೆ ಬದಿಯಲ್ಲಿ ಕಳೆದೆರಡು ವರ್ಷಗಳಿಂದ ಪಂ.ಕುಡಿಯುವ ನೀರಿನ ಕೊಳವೆ ಬಾವಿಯ ತ್ರೀ ಫೇಸ್ ವಿದ್ಯುತ್ ಬೋರ್ಡ್ ಮರದಲ್ಲಿ ನೇತಾಡುತ್ತಾ ಅಮಾಯಕರ ಪ್ರಾಣ ಬಲಿ ಪಡೆಯಲು ಕಾದು ಕುಳಿತಿತ್ತು. ಈ ಬಗ್ಗೆ ಹಲವಾರು ಬಾರಿ ಪಂ. ಆಡಳಿತಕ್ಕೆ ಹಾಗೂ ಪಿಡಿಒ ಗೆ ಗ್ರಾಮಸ್ಥರು ಮನವಿ ಮಾಡಿ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ. ಅದೂ ಅಲ್ಲದೇ ಪಂ.ಅಧ್ಯಕ್ಷರ ಮನೆಗೆ ಹೋಗುವ ರಸ್ತೆಯೂ ಇದಾಗಿದ್ದರೂ ಅದ್ಯಾಕೋ ಮರದಲ್ಲಿ ನೇತಾಡುತ್ತಿದ್ದ ವಿದ್ಯುತ್ ಬೋರ್ಡಿಗೆ ಮುಕ್ತಿ ನೀಡುವ ಇಚ್ಛಾಶಕ್ತಿ ಆತನಿಗಿಲ್ಲವಾಗಿತ್ತು.

ಪಂ.ನ ಬೇಜವಾಬ್ದಾರಿ ವಿರುದ್ಧ ಅಮಾಯಕರ ಪ್ರಾಣ ಕಾಪಾಡುವ ಸಲುವಾಗಿ ನೆಮ್ಮದಿಯ ಬದುಕಿನ ಹಿತದೃಷ್ಟಿಯಿಂದ ಬುಧವಾರದಂದು ಗ್ರಾಮಸ್ಥರ ಧ್ವನಿಯಾಗಿ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಲ್ಲದೇ ವರದಿ ಮಾಡುವ ಮೂಲಕ ಎಚ್ಚರಿಸಿತ್ತು.

ವರದಿ ಬಿತ್ತರವಾಗ್ತಿದ್ದಂತೆ ಬುಧವಾರ ಮು‌ಸ್ಸಂಜೆಯೇ ಮರದಿಂದ ಕೆಳಗಿಳಿಸಿದ ವಿದ್ಯುತ್ ಬೋರ್ಡು ಪೆಟ್ಟಿಗೆಯೊಳಗೆ (ಶೆಡ್ಡು) ಭದ್ರವಾಗಿದೆ. ಅವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ವರದಿ ಬಿತ್ತರಿಸಿ ನೊಂದವರ ಧ್ವನಿಯಾಗಿ ಎಚ್ಚರಿಸುವಂತೆ ಮಾಡಿದ ವಿಟಿವಿ ಬಳಗಕ್ಕೆ ಗ್ರಾಮಸ್ಥರು ಶುಭಹಾರೈಸಿದ್ದಾರೆ.

- Advertisement -

Related news

error: Content is protected !!