- Advertisement -
- Advertisement -
ತಿರುವನಂತಪುರಂ: ಇದೆ ಮೊದಲ ಬಾರಿಗೆ ಕೇರಳದಲ್ಲಿ ಜಲ ಟ್ಯಾಕ್ಸಿ ಸೇವೆ ಆರಂಭಿಸಲಾಗಿದ್ದು, ಅಲಪ್ಪುಳದ ಹಿನ್ನೀರಿನಲ್ಲಿ ಈ ಸೇವೆ ಆರಂಭಿಸಲಾಗಿದೆ.
ಈ ಕ್ಯಾಟರ್ ಮನ್ ಟ್ಯಾಕ್ಸಿಯಲ್ಲಿ (ಡೀಸೆಲ್ ದೋಣಿ) ಹತ್ತು ಮಂದಿ ಪ್ರಯಾಣಿಸಬಹುದು. ರಾಜ್ಯ ಜಲ ಸಾರಿಗೆ ಇಲಾಖೆ (SWTD) ಆರಂಭಿಸಲಿರುವ ನಾಲ್ಕು ದೋಣಿಗಳ ಸರಣಿಯಲ್ಲಿ ಇದು ಮೊದಲನೆಯದು. ಈ ವಾಹನ ಬಳಕೆ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿದ ನಂತರ SWTDಯಿಂದ ನಾಲ್ಕು ದೋಣಿಗಳನ್ನು ಸಾರ್ವಜನಿಕ ಸೇವೆಗೆ ಬಳಸಲಾಗುತ್ತಿದೆ. ಈ ಟ್ಯಾಕ್ಸಿ ಸೇವೆ ಕೇವಲ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾತ್ರವಲ್ಲ, ಸ್ಥಳೀಯರ ಸಂಚಾರಕ್ಕೂ ನೆರವಾಗಲಿದೆ.
- Advertisement -