Sunday, May 5, 2024
spot_imgspot_img
spot_imgspot_img

ವಿಟ್ಲ: (ಡಿ.28) ಪ್ರಮಾ ಅಸೋಸಿಯೇಟ್ಸ್ ವಕೀಲರ ಕಛೇರಿಯ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ಪ್ರಮಾ ಅಸೋಸಿಯೇಟ್ಸ್ ವಕೀಲರ ಕಛೇರಿಯ ಶುಭಾರಂಭವು ಡಿ.28 ಗುರುವಾರ ಬೆಳಿಗ್ಗೆ ಗಂಟೆ 9.30ಕ್ಕೆ ರಮಾನಾಥ ಕಾಂಪ್ಲೆಕ್ಸ್, 1 ನೇ ಮಹಡಿ, ಶಾಲಾ ರಸ್ತೆ ಪೊಲೀಸ್ ಠಾಣೆ ಎದುರುಗಡೆ, ವಿಟ್ಲ ಇಲ್ಲಿ ನಡೆಯಲಿದೆ.

ಮೂರುಕಜೆ ಮೈತ್ರೇಯಿ ಗುರುಕುಲಮ್‌ನ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ದೀಪ ಪ್ರಜ್ವಲನೆಗೈಯಲಿದ್ದಾರೆ. ಕೆ.ನಾಗೇಶ ಶರ್ಮ ವಕೀಲರು ಪುತ್ತೂರು, ಕವನ್ ನಾೖಕ್‌ ಡಿ. ವಕೀಲರು ಪುತ್ತೂರು ಗುರುವಂದನೆ ಸ್ವೀಕಾರ ಮತ್ತು ಶುಭಾಶೀರ್ವಾದ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಕುಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಆಚಾರ್‍ ಮಂಕುಡೆ, ನಿವೃತ್ತ ತೆರಿಗೆ ಅಧಿಕಾರಿ ಮತ್ತು ಕೇಪು ಖಂಡಿಗ ಶಿವ ಕ್ಷೇತ್ರದ ಆಡಳಿತ ಮೊಕ್ತೇಸರರಾದ ರವೀಶ ಖಂಡಿಗ, ವಿಟ್ಲ ಬ್ರಹ್ಮಶ್ರೀ ವಿವಿದೊದ್ದೇಶ ಸೇವಾ ಸಹಕಾರಿ ಸಂಘ ನಿ. ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಭಾಗವಹಿಸಲಿದ್ದಾರೆ. ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ ಗೌರವ ಉಪಸ್ಥಿತರಿರುವರು ಎಂದು ವಕೀಲರುಗಳಾದ ಮನೋಜ್‌ ಕುಮಾರ್‌ ಯು. ಮತ್ತು ಪ್ರಶಾಂತ್‌ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!