ವಿಟ್ಲ; ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ (ರಿ.) ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಬಂಟ್ವಾಳ ಮಹಿಳಾ ಮಂಡಲ (ರಿ.) ವಿಟ್ಲ ಇವರ ನೇತೃತ್ವದಲ್ಲಿ “ವಿಶ್ವ ಮಹಿಳಾ ದಿನಾಚರಣೆ” ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ಉಷಾ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಟ್ಲ ಮಹಿಳಾ ಮಂಡಲ ಹಾಗೂ ತಾಲೂಕು ಒಕ್ಕೂಟದ ಅಧ್ಯಕ್ಷರಾದ ಧರ್ಮಾವತಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಗಾಯತ್ರಿ ಇವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಒಕ್ಕೂಟದ ಗೌರವ ಸಲಹೆಗಾರರಾದ ಪ್ರೇಮಲತಾ ರಾವ್ ತಾಲೂಕು ಒಕ್ಕೂಟದ ಉಮಾಧ್ಯಕ್ಷರಾದ ಮೀನಾಕ್ಷಿ ಆರ್.ಪೂಜಾರಿ, ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಹೇಮಲತಾ ಜೆ.ಸಾಲ್ಯಾನ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನೂ, ಜನಾರ್ಧನ ಚೈಪೆ ಇವರಿಂದ ಆಕ್ಯುಪ್ರೆಷರ್ ಚಿಕಿತ್ಸೆ ಬಗ್ಗೆ ಮಾಹಿತಿ ಜೊತೆಗೆ ಚಿಕಿತ್ಸೆಯನ್ನೂ ನೀಡಲಾಯಿತು.
ಪ್ರಾರ್ಥನೆಯನ್ನು ಮನೋಜ್ಞ ರವರು, ನಿರೂಪಣೆಯನ್ನು ಚಂದ್ರಕಾಂತಿಯವರು ಹಾಗೂ ಧನ್ಯವಾದ ಕಾರ್ಯಕ್ರಮವನ್ನು ವಿಜಯಲಕ್ಷ್ಮಿಯವರು ನೆರವೇರಿಸಿದರು.ಸಂಘದ ಪದಾಧಿಕಾರಿಗಳಾದ ರೇಣುಕಾ, ವಿದ್ಯಾ ಕಲ್ಲಡ್ಕ, ಅಮಿತಾಕೃಷ್ಣ , ವಿಮಲಾ ಪಿ. ಶೆಟ್ಟಿ, ಮೀನಾ ನಾಗರಾಜ್, ಸವಿತಾ ಭಟ್, ಪದ್ಮಾವತಿ, ಮುಕ್ತಾ ಭಟ್, ಶುಭಾಂಗಿ ಮೊದಲಾದವರು ಭಾಗವಹಿಸಿದ್ದರು.