Thursday, May 2, 2024
spot_imgspot_img
spot_imgspot_img

ಅಂತರ್ಜಾತಿ ಪ್ರೀತಿ ವಿರೋಧಿಸಿ ಯುವತಿ ತಂದೆಯಿಂದ ಯುವಕನ ಮೇಲೆ ಹಲ್ಲೆ; ಮನನೊಂದು ಯುವಕ ಆತ್ಮಹತ್ಯೆಗೆ ಶರಣು

- Advertisement -G L Acharya panikkar
- Advertisement -

ಅಂತರ್ಜಾತಿ ಪ್ರೀತಿ ವಿರೋಧಿಸಿ ಯುವತಿ ತಂದೆಯಿಂದ ಯುವಕನ ಮೇಲೆ ಹಲ್ಲೆ ಮಾಡಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಗಾಗಿರುವ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ.

ನೇಣುಬಿಗಿದುಕೊಂಡು ಗುರುಲಿಂಗಪ್ಪ ಮುಗಟಿ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ವ್ಯಕ್ತಿ ನೆರೆಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರ ಆಕೆಯ ತಂದೆಗೆ ಗೊತ್ತಾಗಿ, ಮಗಳ ತಂಟೆಗೆ ಬರದಂತೆ ಎಚ್ಚರಿಕೆ ಕೂಡ ನೀಡಿದ್ದನು. ಇದಾದ ಬಳಿಕ ಮೃತ ಗುರುಲಿಂಗಪ್ಪ ಊರುಬಿಟ್ಟು ಬೆಂಗಳೂರು ಸೇರಿದ್ದ. ನಂತರ ಆತನಿಗೆ ಕರೆ ಮಾಡಿದ ಯುವತಿ ಕಲಬುರಗಿಗೆ ಬರುವಂತೆ ಹೇಳಿದ್ದಾಳೆ.

ಊರಿಗೆ ಬರುತ್ತಿದ್ದಂತೆ ಗುರುಲಿಂಗಪ್ಪ ಮತ್ತು ಆತನ ಸೋದರನ ಮೇಲೆ ಕಲ್ಲು, ಕಬ್ಬಿಣದ ರಾಡ್​ನಿಂದ ಯುವತಿ ತಂದೆ ಹಲ್ಲೆ ಮಾಡಿದ್ದ. ಬಳಿಕ ಕೂಡಿ ಹಾಕಿದ್ದರು. ಇದೇ ಕಾರಣಕ್ಕೆ ಮನನೊಂದು ಯುವಕ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!