- Advertisement -
- Advertisement -
ವಿಟ್ಲ: ಹಳೆ ವೈಷಮ್ಯದಿಂದ ಯುವಕನೋರ್ವನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉಕ್ಕುಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕೇಪು ಗ್ರಾಮದ ನಿವಾಸಿ ಹನೀಫ್ ಗಾಯಗೊಂಡಿದ್ದು ಅವರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ನಿವಾಸಿ ಮುಸ್ತಪಾ ಮತ್ತು ಹನೀಫ್ ನಡುವೆ ವಿದೇಶದಲ್ಲಿ ಇರುವಾಗ ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿ ಗಲಾಟೆಯಾಗಿ ವೈಷಮ್ಯ ಬೆಳೆದಿತ್ತು. ಬಳಿಕ ಈ ಬಗ್ಗೆ ರಾಜಿ ಸಂಧಾನ ಕೂಡ ನಡೆದಿತ್ತು.
ಇತ್ತೀಚೆಗೆ ಹನೀಫ್ ಊರಿಗೆ ಬಂದಿದ್ದರು. ಇನ್ನೆರಡು ದಿನಗಳಲ್ಲಿ ವಿದೇಶಕ್ಕೆ ಹೋಗುವ ಸಿದ್ದತೆಯಲ್ಲಿದ್ದರು.ಆದರೆ ನಿನ್ನೆ ವಿಟ್ಲ ಪೇಟೆಯಿಂದ ತೆರಳುವಾಗ ಮುಸ್ತಫಾ ಕಡೆಯವರು ಬಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಹನೀಫ್ ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
- Advertisement -