ಅಪಘಾತವಾದರೆ ಗಾಯಾಳುವಿನ ಗತಿ ಗೋವಿಂದಾ.?
ವಿಟ್ಲ : ಎರಡು ವರ್ಷಗಳಿಂದ ರಿಜಿಸ್ಟ್ರೇಷನ್ ಆಗದೇ, ಇನ್ಸೂರೆನ್ಸ್ ಇಲ್ಲದ ಬಿಳಿ ಬಣ್ಣದ ರೆನಾಲ್ಟ್ ಕ್ವಿಡ್ ಕಾರೊಂದು ಜಿಲ್ಲೆಯಾಧ್ಯಂತ ಸುತ್ತಾಡುತ್ತಿದೆ ಎಂದರೆ ನೀವು ನಂಬ್ತೀರಾ.? ನಂಬಲೇ ಬೇಕು.
ವಿಟ್ಲ ಪಡ್ನೂರು ಗ್ರಾಮದ ಪಡಾರು ಮದಕ ನಿವಾಸಿ ಸತೀಶ್ ಗೌಡ ಎಂಬವರು ಎರಡು ವರ್ಷದ ಹಿಂದೆ ಕ್ವಿಡ್ ಕಾರು ಖರೀದಿಸಿದ್ದರೆನ್ನಲಾಗಿದೆ. ಈವರೆಗೂ ರಿಜಿಸ್ಟ್ರೇಷನ್ ಮಾಡಿಸದೇ ಇನ್ಸೂರೆನ್ಸ್ ಇಲ್ಲದೇ ಜಿಲ್ಲೆಯಾಧ್ಯಂತ ಇದೇ ಕಾರು ಸುತ್ತಾಡುತ್ತಿತ್ತು.
ಎಲ್ಲಾ ದಾಖಲೆಗಳೂ ಸರಿಯಾಗಿದ್ದರೂ ಅಪಘಾತವಾದರೆ ಪರಿಹಾರ ಹಣಕ್ಕಾಗಿ ವರ್ಷಗಟ್ಟಲೆ ಗಾಯಾಳುಗಳು ಒದ್ದಾಡಬೇಕಾಗಿರುವ ಇಂದಿನ ಕಾಲದಲ್ಲಿ ಯಾವುದೇ ದಾಖಲೆಗಳು, ನೋಂದಣಿ ಸಂಖ್ಯೆಯೇ ಇಲ್ಲದ ಕಾರು ಅಪಘಾತವಾದರೆ ಗಾಯಾಳುವಿನ ಗತಿಯೇನು.? ಎಂಬುದು ಜನರನ್ನು ಕಾಡುತ್ತಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಟ್ಲ ಪೊಲೀಸರು ಇಂದು ಬೆಳಗ್ಗೆ ವಿಟ್ಲದಲ್ಲಿ ಕಾರನ್ನು ತಡೆದು ವಿಚಾರಿಸುತ್ತಿದ್ದಂತೆ ಈ ಸ್ಫೋಟಕ ಸುದ್ಧಿ ಬಯಲಾಗಿದೆ. ಕಾರನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.