Tuesday, July 21, 2026
spot_imgspot_img
spot_imgspot_img

ಕಾಡು ಹಂದಿಗಳ ಹತ್ಯೆಗೆ ಕೇರಳ ಸರ್ಕಾರದಿಂದ ಒಪ್ಪಿಗೆ

- Advertisement -
- Advertisement -

ಬೆಳೆ ಹಾನಿ ಮಾಡುವ ಹಾಗೂ ಮನುಷ್ಯನ ಜೀವಕ್ಕೆ ಅಪಾಯ ತರಬಲ್ಲ ಕಾಡು ಹಂದಿಗಳ ಹತ್ಯೆಗೆ ಕೇರಳ ಸರ್ಕಾರ ಅನುಮತಿ ನೀಡಿದೆ.

ಸ್ಥಳೀಯಾಡಳಿತದ ಅನುಮತಿಯೊಂದಿಗೆ ಜನರು ಕಾಡು ಹಂದಿಯನ್ನು ಕೊಲ್ಲಲು ಸರ್ಕಾರ ಸೂಚನೆ ನೀಡಿರುವುದರ ವಿರುದ್ಧ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡು ಪ್ರದೇಶದ ಸಮೀಪದಲ್ಲಿ ವಾಸಿಸುವ ರೈತರು ಮತ್ತು ಜನರು, ಕಾಡುಹಂದಿಗಳಿಂದ ತಮಗೆ ಉಂಟಾಗುತ್ತಿರುವ ತೊಂದರೆ, ಬೆಳೆ ಹಾನಿ ಕುರಿತು ಸರ್ಕಾರಕ್ಕೆ ದೂರು ನೀಡಿದ್ದರು.

ಅದರ ಸಲುವಾಗಿ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಯಾವ ಪ್ರದೇಶಗಳಲ್ಲಿ ಕಾಡು ಹಂದಿ ಉಪಟಳವಿದೆಯೋ ಅಲ್ಲಿ ಹತ್ಯೆ ಮಾಡಬಹುದು ಎಂದು ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದೆ.

- Advertisement -

Related news

error: Content is protected !!