- Advertisement -
- Advertisement -
ಚಿಕ್ಕಮಗಳೂರು: ಇಲ್ಲಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ನಿಲುವಾಗಿಲು ಗ್ರಾಮದ ಸುಬ್ರಹ್ಮಣ್ಯ (30) ಹಾಗೂ ಸುನಿಲ್ (27) ಮೃತ ದುರ್ದೈವಿಗಳು.
ಸುಬ್ರಹ್ಮಣ್ಯ ಹಾಗೂ ಸುನಿಲ್ ಟ್ರ್ಯಾಕ್ಟರ್ ಟೈರ್ ಬದಲಾಯಿಸಲು ಮುಂದಾಗಿದ್ದರು. ಈ ವೇಳೆ ಜಾಕ್ ಸ್ಲಿಪ್ ಆಗಿದ್ದು, ಟ್ರ್ಯಾಕ್ಟರ್ ಟ್ರಾಲಿ ಕೆಳಗೆ ಸಿಲುಕಿದ್ದಾರೆ. ಹೊರಬರಲು ಆಗದೆ ಗಂಭೀರ ಗಾಯಗೊಂಡು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
- Advertisement -