
ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ರವರ ಮಾರ್ಗದರ್ಶನ ದಲ್ಲಿ, ರಾಜ್ಯಾಧ್ಯಕ್ಷರಾದ ಚಂದ್ರಪ್ಪ ರವರ ಅದ್ಯಕ್ಷತೆಯಲ್ಲಿ, ಬೆಂಗಳೂರು ಜಿಲ್ಲಾಧ್ಯಕ್ಷರಾದ ಜೆ. ಶ್ರೀನಿವಾಸ್ ರವರ ಉಪಸ್ಥಿತಿಯಲ್ಲಿ, ಹೋಟೆಲ್ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ನಾಯಕ್ ರವರ ಸಮ್ಮುಖದಲ್ಲಿ, ಬೆಂಗಳೂರು ಜಿಲ್ಲಾ ಹೋಟೆಲ್ ಘಟಕದ ಸಭೆಯು ಅ.22ರಂದು ಸಂಘಟನೆ ಯ ಪ್ರದಾನ ಕಚೇರಿಯಲ್ಲಿ ನಡೆಯಿತು. ಹಾಗೂ ನೂತನವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಡಿ. ಉಮೇಶ್ ಪೂಂಜ
ಕಾರ್ಯಧ್ಯಕ್ಷರಾಗಿ ಹರೀಶ್ ಶೆಟ್ಟಿರವರು ಆಯ್ಕೆಯಾದರು.
ಗೌರವ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ ಕುತ್ಯಾರು,
ಉಪಾಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ, ಕಾನೂನು ಸಲಹೆಗಾರರಾಗಿ ಎಂ ಆರ್ ಬಾಲಕೃಷ್ಣ, ಕಾರ್ಯದರ್ಶಿಯಾಗಿ ನವೀನ್ ವಿ.ಕೆ, ಜಂಟಿ ಕಾರ್ಯದರ್ಶಿ ದಿನೇಶ್, ಖಜಾಂಚಿಯಾಗಿ ವಾಸುದೇವ ಭಟ್, ಸಂಘಟನಾ ಕಾರ್ಯದರ್ಶಿಗಳಾಗಿ ಅಲೀಮ್ ಪಾಶ, ವಿಶ್ವನಾಥ್ ಶೆಟ್ಟಿ, ದಿನೇಶ್ ಶೆಟ್ಟಿ, ಪ್ರದಾನ ಸಂಚಾಲಕರಾಗಿ ಗಣೇಶ್ ನಾಯಕ್, ಸಂಚಾಲಕರಾಗಿ ರಮೇಶ್ ಶೆಟ್ಟಿರವರ ಆಯ್ಕೆಯು ನಡೆಯಿತು.

ಹಿರಿಯರಾದ ಶ್ರೀಧರ್ ಶೆಟ್ಟಿ, ಉಮೇಶ್ ರೈ ಕಡಬ, ನಯಾಜ್, ಸುಭಾಷ್ ಶೆಟ್ಟಿರವರು ಉಪಸ್ಥಿತರಿದ್ದರು












