- Advertisement -
- Advertisement -
ನಿರ್ಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಹೋಟೆಲ್ ಅಶೋಕಾದಲ್ಲಿ ಬೀಳ್ಕೊಡುಗೆ ಔತಣ ಕೂಟ ಏರ್ಪಡಿಸಿದರು.
ಈ ಭೋಜನವು ಒಂದು ಅರ್ಥದಲ್ಲಿ ವಿಶಿಷ್ಟವಾಗಿದೆ. ಏಕೆಂದರೆ ಇದು ದೆಹಲಿಯಲ್ಲಿನ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮಾತ್ರ ಹೊಂದಿರಲಿಲ್ಲ. ಈ ಔತಣಕೋಟದಲ್ಲಿ ದೇಶದ ಎಲ್ಲಾ ಭಾಗಗಳಿಂದ ಸಾಧಕ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ವಿವಿಧ ಪದ್ಮ ಪ್ರಶಸ್ತಿ ಪುರಸ್ಕೃತರು ಈ ಔತಣ ಕೂಡದಲ್ಲಿ ಉಪಸ್ಥಿತರಿದ್ದರು.
ಔತಣಕೂಟವು ಅನೇಕ ಬುಡಕಟ್ಟು ನಾಯಕರನ್ನು ಹೊಂದಿತ್ತು. ಪ್ರತಿಯೊಬ್ಬರನ್ನು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿಯಾದರು.
ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಭಾರತದ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಯಶಸ್ವಿ ಅವಧಿಯನ್ನು ಪೂರ್ಣಗೊಳಿಸಿ ಜುಲೈ 24 ರಂದು ರಾಷ್ಟ್ರಪತಿ ಭವನದಿಂದ ನಿರ್ಗಮಿಸಲಿದ್ದಾರೆ.
- Advertisement -








