- Advertisement -
- Advertisement -
ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ( ರಿ ) ಬೆಂಗಳೂರು ಐಕೇರ್ ಬ್ರಿಗೇಡ್, ಐಕೇರ್ ಫೌಂಡೇಶನ್ ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರು, ಪರಿಸರವಾದಿಗಳು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರ ಹುಟ್ಟುಹಬ್ಬ ಆಚರಣೆಯನ್ನು ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪುತ್ತೂರಿನ ಬೀರಮಲೆಯಲ್ಲಿರುವ ಪ್ರಜ್ಞಾ ವಿಕಲ ಚೇತನ ಆಶ್ರಮದಲ್ಲಿ ಮಕ್ಕಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರವೀಣ್ ಶೆಟ್ಟಿ ತಿಂಗಳಾಡಿ ಜಿಲ್ಲಾಧ್ಯಕ್ಷರು ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು ಅಧ್ಯಕ್ಷ ದೀಪಕ್ ಅಮೀನ್, ಪ್ರಜ್ವತ್ ರೈ ಮಿತ್ರಂಪಾಡಿ, ರಜತ್ ಆಳ್ವ ಪುತ್ತೂರು, ತಿಲಕ್ ರಾಜ್ ಶೆಟ್ಟಿ, ಸುರೇಂದ್ರ ರೈ ಮುಂಡೂರು, ಗಣೇಶ್ ಕರೈ, ಸುನಿಲ್ ಯಾನೆ ಸೋಮು ಮುಂಡೂರು, ಜಗದೀಶ್ ಆಚಾರ್ ತಿಂಗಳಾಡಿ ಉಪಸ್ಥಿತರಿದ್ದರು.
- Advertisement -