ಜನಶಕ್ತಿ ಸೇವಾ ಟ್ರಸ್ಟ್ (ರಿ.), ಮಣಿಕಂಠ ಯುವಶಕ್ತಿ (ರಿ.), ಮಣಿಕಂಠ ಮಾತೃಶಕ್ತಿ, ಕುದ್ರೆಬೆಟ್ಟು – ಕಲ್ಲಡ್ಕ, ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಮಣಿಕಂಠ ಭಜನಾ ಮಂದಿರದ ಚತುರ್ದಶೋತ್ಸವ ಮತ್ತು ದೀಪಾ ಪೂಜನಾ ಭಜನಾ ಮಂಗಳೋತ್ಸವ ಕಾರ್ಯಕ್ರಮ 30-01-2022ನೇ ಆದಿತ್ಯವಾರ ಜರಗಿತು.
ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16-01-2022ನೇ ಶನಿವಾರದಿಂದ 29-01-2022ರ ವರೆಗೆ ಮನೆ ಮನೆ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಗಣಪತಿ ಹೋಮದೊಂದಿಗೆ ಆರಂಭಗೊಂಡಿತು. ಶ್ರೀಮತಿ ಸತೀಶ ರಮ್ಯ , ಬೈಲು ದೀಪ ಪ್ರಜ್ವಲನ ನಡೆಸಿದರು. ಬೆಂಗಳೂರಿನ ಉದ್ಯಮಿ ಆದ ಚಂದ್ರಶೇಖರ ಕುದ್ರೆಬೆಟ್ಟು ಧ್ವಜಾರೋಹಣ ನಡೆಸಿದರು.
ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಿತು, ಮನೆ ಮನೆ ಭಜನಾ ಕಾರ್ಯಕ್ರಮ ನಡೆಸಿ ಪೂರ್ಣಾಹ ಭಜನಾ ಕಾರ್ಯಕ್ರಮ ನಡೆದು, ಸಾಧಕರಿಗೆ ಗೌರವಾರ್ಪಣೆ, ಭಾರತಮಾತಾ ಪೂಜನಾ ಕಾರ್ಯಕ್ರಮ ಅಲ್ಲದೆ ಭಜನಾ ಮಂಗಳೋತ್ಸವ, ಎಲ್ಲಾ ಮನೆಗಳ ಯಜಮಾನರಿಂದ ದೀಪ ಪ್ರಜ್ವಲಿಸಿ ಮಂಗಳೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ದೇವರಿಗೆ ಮಹಾಪೂಜೆ, ಭಜನಾ ಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆದು ಶ್ರೀ ಕಲ್ಲುರ್ಟಿ ದೈವದ ಕೋಲ ಸೇವೆ ನಡೆಯಿತು, ನಂತರ ಧ್ವಜಾವರೋಹಣ ನಡೆಯಿತು.
ಕಾರ್ಯಕ್ರಮದಲ್ಲಿ ಜನಶಕ್ತಿ ಸೇವಾ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಜಿನ್ನಪ್ಪ ಏಳ್ತಿಮಾರ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ಧರ್ಮದಬಳ್ಳಿ ಕೋಶಾಧಿಕಾರಿ ಭೋಜರಾಜ್, ಟ್ರಸ್ಟಿಗಳಾದ ಮಹಾಬಲ ಕುದ್ರೆಬೆಟ್ಟು, ರವಿ ಸುವರ್ಣ, ಸುಂದರ ಸಾಲಿಯಾನ್, ಶಂಕರ ದರ್ಖಾಸ್, ಮಣಿಕಂಠ ಯವಶಕ್ತಿ (ರಿ.)ನ ಅಧ್ಯಕ್ಷರಾದ ಮಾಧವ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಕೋಶಾಧಿಕಾರಿ ರಮೇಶ್ ಕೆ. ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಮಣಿಕಂಠ ಮಾತೃಶಕ್ತಿಯ ಅಧ್ಯಕ್ಷರಾದ ಶೋಭಾ ಜನಾರ್ಧನ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಗೂ ಊರ ಹತ್ತು ಸಮಸ್ತರು ಭಾಗವಹಿಸಿದ್ದರು.