Thursday, July 23, 2026
spot_imgspot_img
spot_imgspot_img

ಬಿ.ಎಸ್ಸಿ ಅಗ್ರಿಕಲ್ಚರ್ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಹಾಸ್ಟಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಬಿ. ಎಸ್ಸಿ ಕೃಷಿ ಪದವಿಗೆ ಪ್ರವೇಶ ಸಿಕ್ಕರೆ ಸಾಕು, ಜೀವನ ಸಾರ್ಥಕ ಆಯಿತು ಅನ್ನೊ ಅದೆಷ್ಟೊ ಜನ ವಿದ್ಯಾರ್ಥಿಗಳ ಮಧ್ಯೆ, ಬಿ.ಎಸ್ಸಿ ಕೃಷಿ ಪದವಿ ವಿದ್ಯಾಭ್ಯಾಸ ಮಾಡ್ತಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ನಿವಾಸಿ ಪವಿತ್ರಾ ಅನ್ನೊ ವಿದ್ಯಾರ್ಥಿನಿ, ತಾನು ವಿದ್ಯಾಭ್ಯಾಸ ಮಾಡ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕುರಬೂರು ಗ್ರಾಮದ ಬಳಿ ಇರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಚಿಂತಾಮಣಿ ಕ್ಯಾಂಪಸ್ ನ ವಸತಿ ನಿಲಯದಲ್ಲೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅದು ಅವನ್ನೊಬ್ಬ ಸ್ನೇಹಿತನಿಂದ… ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅವನೊಬ್ಬ ಸ್ನೇಹಿತ, ಈಗ ಪವಿತ್ರಾಳ ಜೀವನವನ್ನೆ ಕೊನೆ ಗಾಣಿಸಿದ್ದಾನೆ.

ಇಂದು ಬಿಎಸ್ಸಿ ಕೃಷಿ ಪದವಿಯ ಮೂರನೆ ವರ್ಷದ ಪ್ರಾಯೋಗಿಕ ಪರೀಕ್ಷೆ ಇತ್ತು. ಇದ್ರಿಂದ ಸಹಪಾಠಿಗಳ ಜೊತೆ ನಿನ್ನೆ ರಾತ್ರಿ ಹಾಸ್ಟಲ್ ನಲ್ಲಿ ಪವಿತ್ರಾ ವಿದ್ಯಾಭ್ಯಾಸ ಮಾಡ್ತಿದ್ದಳು. ಆದ್ರೆ ಪದೆ ಪದೆ ಸಂತೋಷ ಅನ್ನೊ ಯುವಕ ಹೈದರಾಬಾದ್ ನಿಂದ ಕರೆ ಮಾಡ್ತಿದ್ದ. ನಿರಂತರವಾಗಿ ಪೋನ್ ರಿಂಗ್ ಆಗ್ತಿತ್ತು. ಇದ್ರಿಂದ ರೋಸಿ ಹೋದ ಪವಿತ್ರಾಳ ಸ್ನೇಹಿತೆಯರು, ಪ್ರತ್ಯೇಕ ರೂಮ್ ನಲ್ಲಿ ಓದಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪವಿತ್ರ ಹಾಸ್ಟಲ್ ನ 19 ನೆ ರೂಮ್ ನಲ್ಲಿ ಒಬ್ಬಳೆ ಓದಲು ಹೋಗಿದ್ದಾಳೆ. ಆಗ ಕೆಲವು ಹೊತ್ತು ತನ್ನ ಸ್ನೇಹಿತ ಸಂತೋಷ ಜೊತೆ ಪೋನ್ ನಲ್ಲಿ ವಿಡಿಯೊ ಕಾಲ್ ನಲ್ಲಿ ಮಾತನಾಡಿದ್ದಾಳೆ. ಪರೀಕ್ಷೆ ಇದೆ ಸಾಕು ಸಾಕು ಅಂದ್ರೂ ಅವನು ಬಿಟ್ಟಿಲ್ಲ. ಇದ್ರಿಂದ ಮನನೊಂದು ಪವಿತ್ರಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲೈನ್ ನಲ್ಲೆ ಇದ್ದ ಆಕೆಯ ಸ್ನೇಹಿತ ತಕ್ಷಣ ಆಕೆಯ ಸ್ನೇಹಿತೆಯರಿಗೆ ಮೇಸೆಜ್ ಮಾಡಿದ್ದು, ಪವಿತ್ರಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ, ರಕ್ಷಿಸಿ ಅಂತ ತಿಳಿಸಿದ್ದಾನೆ. ಆದ್ರೆ ಅಷ್ಟೊತ್ತಿಗೆ ಪವಿತ್ರಾ ಸಾವಿನ ಮನೆ ಸೇರಿದ್ದಳು. ಇದ್ರಿಂದ ಇದ್ದೊಬ್ಬ ಮಗಳನ್ನು ಕಳೆದುಕೊಂಡು ಆಕೆಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಬಗ್ಗೆ ಚಿಂತಾಮಣಿಯ ಕುರಬೂರು ಕೃಷಿ ಮಹಾವಿದ್ಯಾಲಯದ ಡೀನ್ ಮಾತನಾಡಿದ್ದು ಯಾಕೆ ತಮ್ಮ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಗೊತ್ತಿಲ್ಲ, ಆಕೆಯ ಪೋನ್, ಡೆತ್ ನೋಟ್ ನ್ನು ಚಿಂತಾಮಣಿ ಪೊಲೀಸರು ಜಪ್ತಿ ಮಾಡಿದ್ದು, ತನಿಖೆಯ ನಂತರ ಸತ್ಯ ತಿಳಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತ ಮೃತಳ ತಂದೆ ಶ್ರೀನಾಥ್ ತಮ್ಮ ಮಗಳ ಸಾವಿಗೆ ಆಕೆಯ ಸ್ನೇಹಿತನ ಕಿರುಕುಳವೆ ಕಾರಣವೆಂದು ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಹಿಂದು ಮುಂದು ಏನು ಗೊತ್ತಿಲ್ಲದೆ… ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವನಿಂದಾಗಿ ಪ್ರತಿಭಾವಂತ ವಿದ್ಯಾರ್ಥಿನಿ ಉಸಿರು ಚೆಲ್ಲಿದ್ದು ಮಾತ್ರ ದುರಂತ.

- Advertisement -

Related news

error: Content is protected !!