- Advertisement -
- Advertisement -
ಬೆಳ್ತಂಗಡಿ: ಬಜರಂಗದಳದ ಕಾರ್ಯಕರ್ತ, ಬಿಜೆಪಿ ಮುಖಂಡ ಕೃಷ್ಣ ಧರ್ಮಸ್ಥಳ ಎಂಬಾತನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ದಲಿತ ಯುವಕ ಕನ್ಯಾಡಿ ದಿನೇಶ್ ಅವರ ಕುಟುಂಬಕ್ಕೆ ಪರಿಹಾರ ಧನವನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ.
ಮೃತ ದಿನೇಶ್ ಅವರ ಪತ್ನಿ ಕವಿತಾ ದಿನೇಶ್ ಅವರ ಕೆನರಾ ಬ್ಯಾಂಕ್ ಖಾತೆಗೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಜಂಟಿ ಖಾತೆಯಿಂದ 4,12,500 ರೂ. ಜಮೆ ಮಾಡಲಾಗಿದೆ.
ಫೆ.23ರಂದು ಕ್ಷುಲ್ಲಕ ಕಾರಣಕ್ಕೆ ದಿನೇಶ್ ಮೇಲೆ ಆರೋಪಿ ಕೃಷ್ಣ ಧರ್ಮಸ್ಥಳ ಸಾರ್ವಜನಿಕವಾಗಿ ಥಳಿಸಿ , ಗಂಭೀರ ಗಾಯಗೊಳಿಸಿದ್ದ ಆರೋಪ ಕೇಳಿಬಂದಿತ್ತು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಮಂಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ 11 ದಿನಗಳ ಬಳಿಕ ಜಿಲ್ಲಾಡಳಿತ ಪರಿಹಾರ ಧನವನ್ನು ಸಂತ್ರಸ್ತ ಕುಟುಂಬಕ್ಕೆ ಬಿಡುಗಡೆ ಮಾಡಿದೆ.
- Advertisement -