Tuesday, June 23, 2026
spot_imgspot_img
spot_imgspot_img

ಯುದ್ದ ನಿಲ್ಲಿಸುವಂತೆ ರಷ್ಯಾ ಮನವೊಲಿಸಿ; ಪ್ರಧಾನಿ ಮೋದಿಗೆ ಉಕ್ರೇನ್ ಅಧ್ಯಕ್ಷರ ಮನವಿ

- Advertisement -
- Advertisement -

ಹೊಸದಿಲ್ಲಿ: ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷರ ಮನವೊಲಿಸಿ ಎಂದು ಉಕ್ರೇನ್ ವಿದೇಶಾಂಗ ಸಚಿವರು ಪ್ರಧಾನಿ ಮೋದಿ ಅವರನ್ನುಒತ್ತಾಯಿಸಿದ್ದಾರೆ.

ಭಾರತ ಮತ್ತು ರಷ್ಯಾ ನಡುವೆ ವಿಶೇಷ ಸಂಬಂಧವಿರುವುದರಿಂದ ಭಾರತ ಮಾಡುವ ಒತ್ತಾಯ ಮಹತ್ವ ಪಡೆದುಕೊಳ್ಳಲಿದೆ. ಅಲ್ಲದೆ, ರಷ್ಯಾದೊಂದಿಗೆ ನಿಕಟವಾಗಿರುವ ಇತರ ದೇಶಗಳೂ ಪುಟಿನ್ ಅವರಿಗೆ ಯುದ್ದ ನಿಲ್ಲಿಸುವಂತೆ ಒತ್ತಾಯ ಮಾಡಬಹುದು ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಮನವಿ ಮಾಡಿದ್ದಾರೆ.

vtv vitla
vtv vitla

ನಾಗರಿಕ ಹಿತಾಸಕ್ತಿಗೆ ಈ ಯುದ್ದ ವಿರುದ್ದವಾಗಿದೆ. ಉಕ್ರೇನ್ ನಿಂದ ಭಾರತಕ್ಕೆ ರಫ್ತು ಉದ್ಯಮ, ಜಾಗತಿಕ ಕೃಷಿ ಮಾರುಕಟ್ಟೆಗೆ ಇದರಿಂದ ಹೊಡೆತ ಬೀಳಲಿದೆ. ಉಕ್ರೇನ್ ಕೃಷಿ ಉತ್ಪನ್ನಗಳ ಗ್ರಾಹಕರಲ್ಲಿ ಭಾರತವೂ ಒಂದಾಗಿದೆ. ಹೀಗಾಗಿ ಯುದ್ದ ನಿಲ್ಲಿಸುವ ಅಗತ್ಯವನ್ನು ಮೋದಿಯವರು ಪುಟಿನ್ ಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!