- Advertisement -
- Advertisement -
ವಿಟ್ಲ: ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜ. 12 ರಂದು ನಡೆಯಿತು.
ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಚ್.ಇ ನಾಗರಾಜ್ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿ ನೀಡಿದರು.
ಭಾರತ್ ಸ್ಕೌಟ್ಸ್ & ಗೈಡ್ಸ್ ಅಧ್ಯಕ್ಷ ಸುದರ್ಶನ್ ಪಡಿಯಾರ್, ಉಪಾಧ್ಯಕ್ಷ ಜಯರಾಮ್ ಬಲ್ಲಾಳ್, ಚಂದ್ರನಾಥ್ ಬಸದಿಯ ಕಾರ್ಯಾಧ್ಯಕ್ಷ ಜಿತೇಶ್ ಎಂ., ದರ್ಶನ್ ಮಂಗಳೂರು, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಕೋಶಾಧಿಕಾರಿ ಒ.ಎ ಕೃಷ್ಣ, ಸದಸ್ಯರಾದ ದಿನಕರ ಆಳ್ವ, ಸೀನ ಕಾಶಿಮಠ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐಬಿ ಯಿಂದ ಬಸದಿ, ಪೊಲೀಸ್ ಠಾಣೆಗೆ ಮೆರವಣಿಗೆ ಜಾಥಾ ಸಾಗಿತು.
- Advertisement -