ವಿಟ್ಲ:ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನವಾಗಿ ಕೊಳ್ನಾಡು ಬಿಜೆಪಿ ಮಹಾಶಕ್ತಿಕೇಂದ್ರ ವತಿಯಿಂದ ಕನ್ಯಾನದ ಭಾರತ ಸೇವಾಶ್ರಮದ ಅನಾಥಶ್ರಮ ಮತ್ತು ವೃದ್ದಾಶ್ರಮದ ಒಟ್ಟು 223ಮಂದಿಗೆ ಕೊಳ್ನಾಡು ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಸೇವಾಶ್ರಮದ ಟ್ರಸ್ಟಿಯಾದ ಈಶ್ವರ ಭಟ್, ಮಂಡಲ ರೈತ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಲೋಹಿತ್, ಪಕ್ಷದ ಪ್ರಮುಖರಾದ ಕೆ ಪಿ ರಘುರಾಮ ಶೆಟ್ಟಿ, ರಾಜಾರಾಮ್ ಹೆಗ್ಡೆ ಕುದ್ರಿಯ, ನಾರಾಯಣ ಶೆಟ್ಟಿ ಕುಲ್ಯಾರ್, ಪ್ರಶಾಂತ್ ಶೆಟ್ಟಿ ಅಗರಿ, ಮೋಹನದಾಸ್ ಶೆಟ್ಟಿ ಪುದ್ದೋಟ್ಟು, ರಮೇಶ್ ರಾವ್ ಪತ್ತುಮುಡಿ, ಉದಯ ರಮಣ ಭಟ್, ರಘುರಾಮ ಶೆಟ್ಟಿ ಪಟ್ಲ, ವಿನೋದ್ ಶೆಟ್ಟಿ ಪಟ್ಲ, ಕೃಷ್ಣಪ್ರಸಾದ್ ಶೆಟ್ಟಿ ಮಲಾರು, ಮಾತೇಶ್ ಭಂಡಾರಿ, ಕೃಷ್ಣ ಬನಾರಿ, ಪ್ರಭಾಕರ ಶೆಟ್ಟಿ ನಾಡಾಜೆ, ಶ್ರೀಮತಿ ವಿಜಯ ಪ್ರಭು, ಶ್ರೀಮತಿ ದರ್ಣಮ್ಮ, ಚಂದ್ರಶೇಖರ ಪೂಜಾರಿ, ಶಿವರಾಜ್, ಗಣೇಶ್, ಮನೋಜ್ ಬನಾರಿ, ರಾಜೇಶ್ ಕುಕ್ಕಾಜೆ, ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.