ವಿಟ್ಲ: ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭ 2022-23 ದಿನಾಂಕ 6-12-2022 ಮತ್ತು 7-12-2022 ರಂದು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಡಿ.6 ರಂದು ಬೆಳಿಗ್ಗೆ ನಡೆದ ಧ್ವಜಾರೋಹಣವನ್ನು ನೀರ್ಕಜೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ದೇವಕಿ ಅಮ್ಮ ಪಿ. ನೆರವೇರಿಸಿದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಿಟ್ಲ ಎಸ್.ಡಿ.ಎಂ.ಸಿ ಸರಕಾರಿ ಪ್ರೌಢಶಾಲೆಯ ಗೌರವಾಧ್ಯಕ್ಷ ಪಿ. ಸುಬ್ರಾಯ ಪೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಶ್ರೀ ಯೋಗೀಶ್ವರ ಗೋರಕ್ಷನಾಥ ಮಠದ ಮಠಾಧಿಪತಿಗಳಾದ ರಾಜಗುರು ಶ್ರದ್ಧಾನಾಥಜೀ ಮಹಾರಾಜ್, ವಿಟ್ಲ ಪ.ಪಂ.ಕೌನ್ಸಿಲರ್ ರವಿಪ್ರಕಾಶ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ, ಭಾರತ್ ಸ್ಕೌಟ್ಸ್ &ಗೈಡ್ಸ್ ರಾಜ್ಯ ಪ್ರತಿನಿಧಿ ಬಿ. ಮೊಹಮ್ಮದ್ ತುಂಬೆ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್, ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ, ವಿಟ್ಲ ಕ್ಲಸ್ಟರ್ ಸಿ.ಆರ್.ಪಿ ಬಿಂದು ಬಿ.ಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಭಾಗವಹಿಸಿದ್ದರು.
ಡಿ.7 ರಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಪ.ಪಂ.ಕೌನ್ಸಿಲರ್ ರವಿಪ್ರಕಾಶ್, ಬಂಟ್ವಾಳ ತಾ.ಆಸ್ಪತ್ರೆ ಮಕ್ಕಳ ತಜ್ಞ ಡಾ| ಪ್ರಶಾಂತ್ ಬಿ.ಎನ್, ರಾಘವೇಂದ್ರ ಬಲ್ಲಾಳ್ ಸಮನ್ವಯಾಧಿಕಾರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ವಿಟ್ಲ ಆರಕ್ಷಕ ಠಾಣೆ ವೃತ್ತ ನಿರೀಕ್ಷಕ ಎಚ್.ಇ ನಾಗರಾಜ ಎಂ.ಎ, ವಿಟ್ಲ ಶ್ರೀ ಭಾರತೀ ಜನಾರ್ದನ ಸೇವಾ ಟ್ರಸ್ಟ್ನ ಅಧ್ಯಕ್ಷ ಪಿ.ಸುಬ್ರಾಯ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಟ್ಲ ಅಂಗನವಾಡಿ, ಪೂರ್ವಪ್ರಾಥಮಿಕ, ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.