Tuesday, September 1, 2026
spot_imgspot_img
spot_imgspot_img

ಸೆಲ್ಫಿ ತೆಗೆಯಲು ಹೋದ ನಾಲ್ವರು ಸಮುದ್ರ ಪಾಲು

- Advertisement -
- Advertisement -

ಶ್ರೀಕಾಕುಳಂ: ಹುಟ್ಟುಹಬ್ಬ ಆಚರಣೆ ಬಳಿಕ ಸಮುದ್ರದ ಬಳಿ ಸೆಲ್ಫಿ ತೆಗೆಯಲು ತೆರಳಿದ ನಾಲ್ವರು ಸಮುದ್ರದಲ್ಲಿ ಅಲೆಗಳ ರಭಸಕ್ಕೆ ಸಿಕ್ಕಿ ಮೃತಪಟ್ಟಿರುವ ಘಟನೆ ಪುಕ್ಕಳ್ಲಪಾಲೆಂ ನಲ್ಲಿ ನಡೆದಿದೆ.

ಸಾಯಿ ಲೋಕೇಶ್​ (20), ತಿರುಮಲ (17), ಮನೋಜ್ (21) ಮತ್ತು ಗೋಪಿಚಂದ ಸಮುದ್ರಪಾಲಾಗಿರುವ ಯುವಕರು. ಬೊರ್ರಪುಟ್ಟಗ ನಿವಾಸಿ ಸಾಯಿ ಲೋಕೇಶ್​ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 18 ಮಂದಿ ಸ್ನೇಹಿತರೊಡನೆ ಪುಕ್ಕಳ್ಲಪಾಲೆಂ ಸಮುದ್ರ ತೀರದಲ್ಲಿ ಹುಟ್ಟುಹಬ್ಬ ಆಚರಿಸಿದ್ದಾನೆ.

ಬಳಿಕ ಇವರಲ್ಲಿ ಐವರು ಸೆಲ್ಫಿ ತೆಗೆದುಕೊಳ್ಳಲು ಸಮುದ್ರದ ಒಳಭಾಗಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಐವರು ನೀರಿನಲ್ಲಿ ಸಿಲುಕಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆ ಸಿಬ್ಬಂದಿಗಳು ತೆರಳಿದ್ದು, ಮೂವರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಇನ್ನೋರ್ವನ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರಿದಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕರು ಸಮುದ್ರದೊಳಗೆ ದುಸ್ಸಾಹಸಕ್ಕೆ ಕೈ ಹಾಕಿ ಜೀವ ಕಳೆದುಕೊಂಡಿದ್ದು ದುರಂತವಾಗಿದೆ

- Advertisement -

Related news

error: Content is protected !!