- Advertisement -
- Advertisement -
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು, ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ಗೆ ಗುತ್ತಿಗೆಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನ ಕಾಯ್ದಿರಿಸಿದೆ.
ನೌಕರರ ಸಂಘದ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿ, 50 ವರ್ಷಗಳ ಈ ಗುತ್ತಿಗೆಯಿಂದ ಸರ್ಕಾರಕ್ಕೆ ಬಾರಿ ದೊಡ್ಡ ನಷ್ಟವಾಗಲಿದೆ. ಎಟಿಸಿ ಸೇವೆ ಹೊರತುಪಡಿಸಿ ಬಹುತೇಕ ಎಲ್ಲಾ ಸೇವೆಗಳ ಹಸ್ತಾಂತರ ಮಾಡಲಾಗಿದ್ದು, ರಿಯಾಯಿತಿ ಒಪ್ಪಂದ ಏಕಪಕ್ಷೀಯವಾಗಿದೆ ಎಂದು ದೂರಿದ್ದಾರೆ.
ಪ್ರತಿವಾದಿಯಾಗಿ ಏರ್ಪೋರ್ಟ್ ಅಥಾರಿಟಿ ಪರ ಸಂತೋಷ್ ನಾಗರಾಳೆ ವಾದ ಮಂಡಿಸಿದ್ದು, ಇದಕ್ಕೆ ಬಿಡ್ ಆಹ್ವಾನಿಸಿಯೇ ಗುತ್ತಿಗೆಗೆ ನೀಡಲಾಗಿದ್ದು, 18 ಸೇವೆಗಳ ಪೈಕಿ 7 ಸೇವೆ ಮಾತ್ರ ಗುತ್ತಿಗೆಗೆ ನೀಡಲಾಗಿದೆ ಎಂದಿದ್ದಾರೆ. ಸದ್ಯ ವಾದ-ಪ್ರತಿವಾದಗಳನ್ನ ಆಲಿಸಿದ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.
- Advertisement -