Tuesday, May 7, 2024
spot_imgspot_img
spot_imgspot_img

ಉಡುಪಿ: ದೈವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

- Advertisement -G L Acharya panikkar
- Advertisement -

ಉಡುಪಿ: ಹಿರೇಬೆಟ್ಟುವಿನ ದೈವಸ್ಥಾನವೊಂದರಲ್ಲಿ ದೇವರ ಪೂಜಾ ಸಂಬಂಧಿಸಿದ ವಸ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಹಿರೇಬೆಟ್ಟು ನಿವಾಸಿ ಭಾಸ್ಕರ ಶೆಟ್ಟಿ (49) ಬಂಧಿತ ಆರೋಪಿ. ಪಂಚಲೋಹದ ಪ್ರತಿರೂಪ, ಆರತಿ ತಟ್ಟೆ, ಹಿತ್ತಾಳೆ ವಸ್ತುಗಳು ಮತ್ತು ಬೀಡು ಮನೆಬಲಕಟ್ಟು ದೇವಳದ ಗಂಟೆಯನ್ನು ಈತ ಕಳವುಗೈದಿದ್ದ. ಎಲ್ಲಾ ವಸ್ತುಗಳು ಸೇರಿ ಒಟ್ಟು 50, 000 ರೂ. ಬೆಲೆ ಬಾಳುವಂತದ್ದಾಗಿವೆ.

ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ದಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

vtv vitla
- Advertisement -

Related news

error: Content is protected !!