Thursday, April 25, 2024
spot_imgspot_img
spot_imgspot_img

ಉಡುಪಿ: ಪೊಲೀಸರಿಗೆ ತಲೆ ನೋವಾಗಿದ್ದ ಪ್ರಕರಣ ಅಂತ್ಯ.! ಕುಖ್ಯಾತ ದನಗಳ್ಳರ ಬಂಧನ

- Advertisement -G L Acharya panikkar
- Advertisement -

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಹಟ್ಟಿ ಪ್ರದೇಶಗಳಿಗೆ ನುಗ್ಗಿ ದನ ಕದಿಯುತ್ತಿದ್ದ ಕುಖ್ಯಾತ ದನಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ತಲೆ ನೋವಿಗೆ ಕಾರಣವಾಗಿದ್ದ ಈ ಪ್ರಕರಣ ಅಂತ್ಯ ಕಂಡಿದೆ.

ಬಂಧಿತರನ್ನು ಮೂಡಬಿದ್ರಿ ಗಂಟಾಲ್ಕಟ್ಟೆಯ ಝುಬೈರ್, ಸಲೀಂ, ಹನಿಫ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕಾರ್ಕಳದ ಶಿರ್ಲಾಲು ಅಂಡಾರ ಮತ್ತು ಕೆರ್ವಾಶೆಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ದನಗಳ್ಳತನ ಮಾಡುತ್ತಿದ್ದರು. ಈ ಘಟನೆಯಿಂದಾಗಿ ಕಳೆದ ಎರಡು ವಾರದಿಂದ ಜಿಲ್ಲೆಯಲ್ಲಿ ಅಶಾಂತಿಗೆ ಕಾರಣವಾಗಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳು ಹಲವಾರು ಕಡೆ ಪ್ರತಿಭಟನೆ ನಡೆಸಿದ್ದಾರೆ.

ಆರೋಪಿಗಳನ್ನು ಪೊಲೀಸರು ಮೂಡಬಿದ್ರೆಯಲ್ಲಿ ಬಂಧಿಸಿದ್ದು, ಬಂಧನ ಸಂದರ್ಭ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

driving
- Advertisement -

Related news

error: Content is protected !!