- Advertisement -
- Advertisement -


ಉಡುಪಿ: ಕಳೆದ 25 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಬಾರ್ಕೂರಿನ ನಿವಾಸಿ ಬಾಬು ಮರಕಾಲ ಮೃತಪಟ್ಟಿರುವ ವ್ಯಕ್ತಿ. ಬಾಬು ಮರಕಾಲ ಕಳೆದ ತಿಂಗಳೂ ಉಡುಪಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ರು. ಆಗ ಇವರನ್ನು ಸಮಾಜಸೇವಕರಾದ ನಿತ್ಯಾನಂದ ಆಸ್ಪತ್ರೆಗೆ ದಾಖಲಿಸಿದರು. ನಂತರ ಚಿಕಿತ್ಸೆ ಫಲಿಸಿದ ವೃದ್ಧ ಸಾವನ್ನಪ್ಪಿದು, ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿಡಲಾಗಿತ್ತು.
ಇದೀಗ ಸಂಬಂಧಿಕರಿಗೆ ಬಾಬು ಮರಕಾಲ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ. ಆ ಬಳಿಕ ಸಂಬಂಧಿಕರು ಆಸ್ಪತ್ರೆಯನ್ನು ಸಂಪರ್ಕಿಸಿ ಕಾನೂನು ಪ್ರಕ್ರಿಯೆ ಮೂಲಕ ಶವವನ್ನು ಪಡೆದುಕೊಂಡರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯದಿಂದ ಅಂತ್ಯಸಂಸ್ಕಾರವನ್ನೂ ನಡೆಸಿದ್ದಾರೆ. ಇವರು ಕಳೆದ 25 ವರ್ಷಗಳಿಂದ ಯಾವುದೋ ಕಾರಣಕ್ಕೆ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ.
- ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಎಸ್.ಐ.ಆರ್ ಕಾರ್ಯಾಗಾರ
- ನೀಟ್ ಮರುಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ!
- ವಿಟ್ಲ: ಲಯನ್ಸ್ ಕ್ಲಬ್ ಮತ್ತು ಯಕ್ಷಭಾರತ ಸೇವಾ ಸಂಸ್ಥೆ ವತಿಯಿಂದ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮೇಗಿನಪೇಟೆಯ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ
- ವಿಧಾನ ಪರಿಷತ್ ಚುನಾವಣೆ; ಶಾಸಕರಿಂದ ಮತದಾನ
- ಪುತ್ತೂರು: ಸುದಾನ ಪದವಿ ಪೂರ್ವ ಕಾಲೇಜು; ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಕೆ.ಎಸ್.ಯಾಸಿರ್ ಹಾಜಿ ಕಲ್ಲಡ್ಕ ಆಯ್ಕೆ


- Advertisement -








