- Advertisement -
- Advertisement -
ಉಳ್ಳಾಲ : ಸಿಟಿ ಬಸ್’ನಲ್ಲಿ ಪ್ರಯಾಣಿಕರು ಬಿಟ್ಟು ಹೋದ 10 ಸಾವಿರ ರೂ. ನಗದನ್ನು ಬಸ್ ಚಾಲಕ ದಿನಕರ್ ಹಾಗೂ ನಿರ್ವಾಹಕ ಅಲ್ತಾಫ್ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳೂರು ತಲಪಾಡಿ ರೂಟ್ ನಲ್ಲಿ ಸಂಚರಿಸುವ 42 ರೂಟ್ ನಂಬರ್ ನ ಮಹೇಶ್ ಬಸ್ ರವಿವಾರ ಬೆಳಗ್ಗೆ 10.45ರ ವೇಳೆಗೆ ತಲಪಾಡಿಯಿಂದ ಮಂಗಳೂರು ಕಡೆ ಸಂಚರಿಸುವಾಗ ತೊಕ್ಕೊಟ್ಟು ಬಳಿ ಬಸ್ ನ ಹಿಂದಿನ ಸೀಟ್ ನಲ್ಲಿ ಬಿದ್ದಿದ್ದ 10 ಸಾವಿರ ರೂ. ನಗದು ನಿರ್ವಾಹಕ ಅಲ್ತಾಫ್ ಅವರಿಗೆ ಸಿಕ್ಕಿದೆ. ಕೂಡಲೇ ಅವರು ಮೆನೇಜರ್ ರಂಜಿತ್ ಗೆ ಮಾಹಿತಿ ನೀಡಿದ್ದಾರೆ.
ಮೆನೇಜರ್ ರಂಜಿತ್ ಅವರ ಸೂಚನೆ ಮೇರೆಗೆ ಚಾಲಕ ದಿನಕರ್ ಹಾಗೂ ನಿರ್ವಾಹಕ ಅಲ್ತಾಫ್ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿ 10 ಸಾವಿರ ರೂ. ನಗದು ಹಣವನ್ನು ಒಪ್ಪಿಸಿದ್ದಾರೆ.
- Advertisement -